March 29, 2024

Bhavana Tv

Its Your Channel

ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಸ್ವತಃ ರಕ್ತ ದಾನ ಮಾಡಿದ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷರು ಸಿ ರಮೇಶ್

ಕಲಬುರ್ಗಿ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಕಲ್ಬುರ್ಗಿ ಜಿಲ್ಲಾ ಸಮಿತಿಯು ಆಯೋಜಿಸಿದ್ದ ರಕ್ತ ದಾನ ಕಾರ್ಯಕ್ರಮವನ್ನು ಸಿ ರಮೇಶ್ ರಾಜ್ಯಾಧ್ಯಕ್ಷರು ಕೇಂದ್ರ ಸಮಿತಿ ಉದ್ಘಾಟಿಸಿ ಸ್ವತಃ ರಕ್ತ ದಾನ ಮಾಡಿದರು.

ಇವರ ಜೊತೆಗೆ ಕೇಂದ್ರ ಸಮಿತಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಮಿತಿಯ ಛೇರ್ಮನ್ ಗಳು ಸ್ಥಳೀಯ ಪದಾಧಿಕಾರಿಗಳು ಮುಖಂಡರುಗಳು ಸದಸ್ಯರುಗಳು ಭಾಗವಹಿಸಿ ರಕ್ತದಾನ ಮಾಡಿದರು.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಸಿ ರಮೇಶ ರಾಜ್ಯಾಧ್ಯಕ್ಷರು ರವರ ನೇತೃತ್ವದಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಯಿತು.
ನಂತರ ಸ್ಥಳೀಯ ಪದಾಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಯದುಕುಮಾರ ತಿಳಿಸಿದ್ದಾರೆ.

error: