ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರದ ಸಂತ ಅಂತೋನಿ ಚರ್ಚ್ ನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು .
ಈ ಸಂದರ್ಭದಲ್ಲಿ ಸಂತ ಅಂತೋನಿ ಚರ್ಚ್ ಗೋಪಾಲಪುರ ದಲ್ಲಿ ಬೆಳಿಗ್ಗೆ 9ಗಂಟೆಗೆ ಫಾದರ್ ಸನ್ನಿ ರವರು ದೇಶದ ಜನತೆಗಾಗಿ ದೇಶದ ಒಳಿತಿಗಾಗಿ ಬೆಳಗ್ಗಿನ ಪೂಜೆ ಅರ್ಪಿಸಲಾಯಿತು . ನಂತರ ಫಾದರ್ ಸನ್ನಿ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು . ನಂರ ಮಾತನಾಡಿದ ಫಾದರ್ ಸನ್ನಿ ರವರು ನಾವು 75 ಸ್ವಾತಂತ್ರ್ಯೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು ಹಾಗೂ ದೇಶದ ಜನತೆಗೆ ಒಳ್ಳೆಯದಾಗಲಿ ಹಾಗೂ ಸ್ವತಂತ್ರಕ್ಕಾಗಿ ಬಲಿದಾನಗೈದ ಮಹನೀಯರನ್ನು ನಾವು ಸ್ಮರಿಸಬೇಕು ಅವರ ಆದರ್ಶಗಳನ್ನು ಪಾಲಿಸಬೇಕೆಂದು ಚರ್ಚ್ನ ಭಕ್ತಾದಿಗಳಿಗೆ ಹಿತನುಡಿ ಹೇಳಿದರು .. ಇದೇ ಸಂದರ್ಭದಲ್ಲಿ ಬಸವನಕೊಪ್ಪದ ಜೋಸೆಫ್ ರವರು ನೆರೆದಿದ್ದ ಜನರಿಗೆ ಸಿಹಿ ಹಂಚಿದರು .
ಕೊಡ್ಲಿಪೇಟೆಯ ಸೆಂಟ್ ಆ್ಯನ್ಸ್ ಕಾನ್ವೆಂಟ್ ಸಿಸ್ಟರ್ಸ್ ಗಳು ಪಾಲ್ಗೊಂಡಿದ್ದರು ಹಾಗೂ ಬೀಟಿಕಟ್ಟೆ . ಗೋಪಾಲಪುರ . ಬಸವನಕೊಪ್ಪ . ಕಳಲೆ ಹೊಸೂರು . ಶನಿವಾರಸಂತೆ ಬಂದAತಹ ಭಕ್ತಾದಿಗಳು 75 ನೆ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.
More Stories
ಅನಾಥ ಅಜ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೇರೆದ ಕರವೇ ಫ್ರಾನ್ಸಿಸ್ ಡಿಸೋಜಾ.
ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ
ಗೌಡಳ್ಳಿ ಗ್ರಾಮ ಪಂಚಾಯಿತಿ ಮುಂದೆ ಉದ್ಯಾನವನದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ