April 25, 2024

Bhavana Tv

Its Your Channel

ಪ್ರಭುರಾಜೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಂಗಲ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಯರಿಗೋನಾಳ ಗ್ರಾಮದ ಪ್ರಭು ಶಂಕರೇಶ್ವರ ಮಠದ ಆವರಣದಲ್ಲಿ ಶ್ರೀ ಪ್ರಭು ರಾಜೇಂದ್ರ ಮಹಾ ಸ್ವಾಮೀಜಿಯವರ ಯಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲ ಕಾರ್ಯಕ್ರಮವು ಖೇಡಗಿ ವಿರಕ್ತಮಠದ ಪೂಜ್ಯ ಶಿವಬಸವರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ,ಅಮೀನಗಡ ಯರಿಗೋನಾಳದ ಶ್ರೀ ಪ್ರಭು ಶಂಕರೇಶ್ವರ ಮಠದ ಪೂಜ್ಯ ಶಂಕರರಾಜೇAದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಿಡಗುಂದಿ -ಹಡಗಲಿಯ ಶ್ರೀ ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು , ಶ್ರೀ ಅಡವೀರೇಶ್ವರ ಶಿವಾಚಾರ್ಯ ಹಿರೇಮಠ ಜಂಬಲಗಿ,ಶ್ರೀ ಶಿವಸಂಗಮೇಶ್ವರ ದೇವರು ಹಿರೇಮಠ ಪುರಗಿರಿ,ಶ್ರೀ ಅಮರೇಶ್ವರ ದೇವರು ಗಜ್ಜಿನಮಠ ಹುನಗುಂದ ಹರ ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಜರುಗಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂಟರಠಾಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರತ್ನಾ ಹನಮಂತಪ್ಪ ಹುಲಗನ್ನವರ ,ಗ್ರಾಮ ಪಂಚಾಯತ್ ಸದಸ್ಯ ಮಹಾಂತೇಶ ಎಸ್ ತಮ್ಮಣ್ಣವರ,ನಿಂಗಪ್ಪ ನರಗುಂದ ,ಗುರುಗೌಡ ಪಾಟೀಲ ,ಸಂಗನಗೌಡ ಪಾಟೀಲ , ಅಶೋಕ್ ಬೇವೂರು ವೇದಿಕೆಯಲ್ಲಿದ್ದರು .

ಗ್ರಾನೆಟ್ ಉದ್ಯಮಿದಾರರಾದ ಸಿದ್ದಣ್ಣ ಸಂಗಪ್ಪ ಚನ್ನಪ್ಪನವರ ಅವರನ್ನು ಸತ್ಕರಿಸಿ ಗೌರವಿಸಲಾಯಿತು .

ಪ್ರತಿನಿತ್ಯ ದಾಸೋಹ ಸೇವೆ ಮಾಡಿದ ಗಣ್ಯರಿಗೆ ಗಣ್ಯರಿಗೆ ಸಂಘಸAಸ್ಥೆಗಳಿಗೆ ಸನ್ಮಾನ ಮಾಡಲಾಯಿತು .

ಸಾಯಂಕಾಲ 6ಗಂಟೆಗೆ ಲಿಂಗೈಕ್ಯ ಶ್ರೀ ಶ್ರೀ ಸಾಮ್ರಾಜ್ಯದ ಪ್ರಭುರಾಜೇಂದ್ರ ಮಹಾಸ್ವಾಮಿಗಳ ಸ್ವಾಮೀಜಿಯವರ ರಥೋತ್ಸವವು ವಿಜೃಂಭಣೆಯಿAದ ಜರುಗಿತು .

ಪುರಾಣ ಮಂಗಲ ಕಾರ್ಯಕ್ರಮವು ರಾತ್ರಿ .7.30 ಕ್ಕೆ ಶ್ರೀ ಪರಮಪೂಜ್ಯ ಶಿವಯೋಗಿ ಪಂ// ಡಾ// ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಬಸಯ್ಯ ಶಾಸ್ತ್ರಿಗಳು ಅರಳಗುಂಡಗಿ ಗಾಯಕರು ಮೌನೇಶ್ ಮಾರಟಗಿ ತಬಲಾ ವಾದಕರು ಮೌನೇಶ್ ಆಶಾ ವಹಿಸಿದ್ದರು .

11 ನೇ ತಾರಿಕಿನಿಂದ ಪ್ರಾರಂಭಗೊAಡ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಪುರಾಣ ಮಂಗಲಗೊAಡಿತು .

ವರದಿ:ವಿನೋದ ಬಾರಿಗಿಡದ ಕುಷ್ಟಗಿ

error: