March 29, 2024

Bhavana Tv

Its Your Channel

ನಾಗಮಂಗಲ ಬಿಜೆಪಿ ಘಟಕದ ವತಿಯಿಂದ ಆಹಾರ ಕಿಟ್ ವಿತರಣೆ

ನಾಗಮಂಗಲ . ; ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾದ ನಾರಾಯಣಗೌಡ ರವರು ಮಂಡ್ಯ ಜಿಲ್ಲಾ ವ್ಯಾಪ್ತಿಯ ಕಡುಬಡವರು ಮತ್ತು ನಿರ್ಗತಿಕರು ಕರೋನವೈರಸ್ ಮಹಾಮಾರಿ ಇಂದ ಸಂಕಷ್ಟಕ್ಕೆ ಒಳಗಾಗಿರುವುದನ್ನು ಅರಿತು ಜಿಲ್ಲಾ ವ್ಯಾಪ್ತಿಯಲ್ಲಿ ತಾಲೂಕು ಬಿಜೆಪಿ ಘಟಕಗಳ ಮೂಲಕ ಆಹಾರ ಕಿಟ್ ವಿತರಿಸುತ್ತಿದ್ದು ಮಂಗಳವಾರ ನಾಗಮಂಗಲ ಬಿಜೆಪಿ ಘಟಕದ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು,

ಮಂಗಳವಾರ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ತಾಲೂಕು ಮಂಡಲ ಅಧ್ಯಕ್ಷರಾದ ಸಿ. ಕೆ.ಸೋಮಶೇಖರ್ ನಾಗಮಂಗಲ ತಾಲೂಕಿನ ವ್ಯಾಪ್ತಿಯ ಕಡುಬಡವರಿಗೆ ಆಹಾರ ಕೀಟಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಸಿ ಕೆ ಸೋಮಶೇಖರ್ ನಮ್ಮ ನಾಯಕರಾದ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾದ ನಾರಾಯಣಗೌಡರು ಯಾವುದೇ ಭೇದಭಾವವಿಲ್ಲದೆ ಕಡುಬಡವರಿಗೆ ಇಂದು ಆಹಾರ ಕೀಟಗಳನ್ನು ವಿತರಿಸುತ್ತಿದ್ದಾರೆ ಅದರ ಜೊತೆಗೆ ಹೊಮ್ ಐಸೋಲೇಷನ್ ಮೆಡಿಸನ್ ಕಿಟ್ ವಿತರಿಸಿದ್ದಾರೆ ಮಾನ್ಯ ಸಚಿವರು ಜನಪಯೋಗಿ ಕೆಲಸಗಳನ್ನು ಮಂಡ್ಯ ಜಿಲ್ಲೆಗೆ ಉತ್ತಮವಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಳ್ಳೂರು ಹೋಬಳಿ ಘಟಕದ ಅಧ್ಯಕ್ಷರಾದ ಆನಂದ್ ಮಾತನಾಡಿ ನಮ್ಮ ಸಚಿವರು ನೀಡಿರುವಂತಹ ಈ ಸಹಾಯವನ್ನು ಈ ಸಂಕಷ್ಟದ ಸಂದರ್ಭದಲ್ಲಿ ಉಪಯೋಗವಾಗಲಿ ಅವರ ಕೆಲಸಗಳು ಜನಪಯೋಗಿ ಆಗಿ ಉಳಿಯಲಿ ಮತ್ತು ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಚಿವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿನೋದ್ ಕುಮಾರ್ ನಂಜುAಡೇಗೌಡ ಹಾಗೂ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ವರದಿ ; ಚಂದ್ರಮೌಳಿ ನಾಗಮಂಗಲ, ಮಂಡ್ಯ

error: