ಮಳವಳ್ಳಿ : ಆಸ್ಪತ್ರೆಯಲ್ಲಿ ಕರೋನ ಸೋಂಕಿತರಿಗೆ ಆತ್ಮಸ್ಥೆöÊರ್ಯ ತುಂಬಲು ಚಿಕಿತ್ಸೆ ನೀಡುತ್ತಿರುವ ನರ್ಸ್ಗಳು ಮತ್ತು ಡಾಕ್ಟರ್ಗಳು ಹಾಡಿಗೆ ನೃತ್ಯ ಮಾಡುವುದರ ಮೂಲಕ ಕರೋನ ರೋಗಿಗಳಿಗೆ ರಂಜನೆಯ ಜೊತೆಗೆ ಆತ್ಮಸ್ಥೆöÊರ್ಯ ತುಂಬಿದ ಅಪರೂಪದ ಪ್ರಸಂಗ ನಡೆಯಿತು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಮಾಧವ ನಾಯಕ್ ಅವರ ನೇತೃತ್ವದಲ್ಲಿ ಡಾಕ್ಟರ್ ಗಳಾದ ಮುರಳೀಧರ್. ಶಿವಕುಮಾರ್ .ನರ್ಸ್ ಗಳಾದ ವಿನಯ್ .ಶ್ವೇತಾ .ಮಂಜುನಾಥ್ . ದ್ರಾಕ್ಷಾಯಿಣಿ .ಸುಮ ಸೇರಿದಂತೆ ಇತರರು ಕನ್ನಡ ಹಾಡಿಗೆ ನೃತ್ಯ ಮಾಡುವುದರ ಮೂಲಕ ಕರೋನ ಸೋಂಕಿತರಿಗೆ ಆತ್ಮಸ್ಥೆöÊರ್ಯ ತುಂಬಿದರು .
ಅದರಲ್ಲೂ ಮಲೇ ಮಹದೇಶ್ವರನ ಭಕ್ತಿಗೀತೆ ” ಏಳುಮಲೆ ಮೇಲೆ ನೀ ನಿದ್ದೆ ಮಾಡೋ ಮಾದೇವ” ಹಾಡಿಗೆ ವೈದ್ಯರು ಹಾಗೂ ಸಿಬ್ಬಂದಿ ಭಾವ ಪರವಶರಾಗಿ ಕುಣಿಯುತ್ತಿರುವ ದೃಶ್ಯವಂತು ಎಂತಹವರನ್ನೂ ಮೈ ಮರೆಯುಂತೆ ಮಾಡದೇ ಇರದು ಸೋಂಕಿತರು ಈ ದೃಶ್ಯದಿಂದ ಪ್ರೇರಣೆಯಾಗಿ ತನ್ನದೆಯಾದ ಚಿಂತೆಗಳನ್ನು ಬಿಟ್ಟು ಮನರಂಜನೆಯಿ0ದ ಅವರೂ ಕುಣಿದು ಕುಪ್ಪಳಿಸಿದರು .
ನಿಜಕ್ಕೂ ಈ ಸಂದರ್ಭ ಇದು ಆಸ್ಪತ್ರೆ ವಾತಾವರಣ ಎಂಬುದನ್ನೇ ಮರೆಸಿ ಯಾವುದೂ ಔತಣಕೂಟದ ಸನ್ನಿವೇಶವನ್ನು ಕೆಲಕಾಲ ಈ ಕಾರ್ಯಕ್ರಮ ಸೃಷ್ಟಿ ಮಾಡಿತ್ತು ಎಂದರೆ ತಪ್ಪಾಗಲಾರದು.
ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ. ಮಳವಳ್ಳಿ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ