March 22, 2024

Bhavana Tv

Its Your Channel

ಬಿ. ರೇವಣ್ಣ ಅಭಿಮಾನಿ ಬಳಗದ ವತಿಯಿಂದ ದಿನಸಿ ಕಿಟ್ ವಿತರಣೆ

ಮಂಡ್ಯ: ಪಾಂಡವಪುರ ಪುರಸಭೆ ಆವರಣದಲ್ಲಿ ಬಿ. ರೇವಣ್ಣ ಅಭಿಮಾನಿ ಬಳಗದ ವತಿಯಿಂದ ಪೌರ ಕಾರ್ಮಿಕರು ಕಛೇರಿ ಸಿಬ್ಬಂದಿ ವರ್ಗದವರು, ಹಾಗೂ ವಾಟರ್ ಸಪ್ಲೇ ಸಿಬ್ಬಂದಿ ವರ್ಗದವರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಬಿ. ರೇವಣ್ಣ ನವರು ಉದ್ಘಾಟಿಸಿದರು.

ಈ ಕೊರೊನ ಮಹಾಮಾರಿಯಿಂದ ಕೂಲಿ ಕಾರ್ಮಿಕರು, ಆಟೋ ಚಾಲಕರು, ಟ್ಯಾಕಿ ಚಾಲಕರು, ಸವಿತಾ ಸಮಾಜದವರು, ಬಿದಿ ವ್ಯಾಪರಿಗಳು, ಅಂಗವಿಕಲರು ಹಾಗೂ ಇನ್ನು ಮುಂತಾದ ಬಡ ಕುಟುಂಬದ ಜನರು ತುಂಬಾ ಸಂಕಷ್ಟ ದಿಂದ ಬದುಕುತ್ತಿದ್ದಾರೆ. ಆದ್ದರಿಂದ ಬಿ. ರೇವಣ್ಣ ಅಭಿಮಾನಿ ಬಳಗ ವತಿಯಿಂದ ಉಚಿತ ದಿನಸಿ ಕಿಟ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಪಾಂಡವಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಕುಬೇರ, ಮಂಜುನಾಥ, ವಿಜಯ್ ಕುಮಾರ್, ಮಹಾದೇವು, ಶ್ರೀಕಂಠ, ಜಗದೀಶ್, ಹಾಗೂ ಬಿ. ರೇವಣ್ಣ ಅಭಿಮಾನಿಗಳು ಹಾಜರಿದ್ದರು…

ವರದಿ..
ಟಿ ಎಸ್ ಶಶಿಕಾಂತ್ ಶೆಟ್ಟಿ
ಮಂಡ್ಯ..ಪಾOಡವಪುರ

error: