ಮಂಡ್ಯ:ಒOದೇ ದಿನ ೪೦ಕ್ಕೂ ಹೆಚ್ಚು ಜನರಿಗೆ ಮನ ಬಂದAತೆ ಕಚ್ಚಿದ ಹುಚ್ಚುನಾಯಿ.. ಸರಣಿ ಕಡಿತಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು.. ಹುಚ್ಚುನಾಯಿ ಸೆರೆಹಿಡಿಯಲು ಆಗ್ರಹಿಸಿದ ಜನಸಾಮಾನ್ಯರು. ನಾಯಿ ಕಡಿತಕ್ಕೆ ಒಳಗಾದ ಕೆಲ ಸಾರ್ವಜನಿಕರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗಳಿಗೆ ರವಾನಿಸಲಾಯಿತು.
ಕೆ ಆರ್ ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಿಂದ ತನ್ನ ರೌದ್ರಾವತಾರವನ್ನು ಸಾಮಾನ್ಯ ಜನರ ಮೇಲೆ ಆರಂಭಿಸಿ ಕೆ ಆರ್ ಪೇಟೆ ಪಟ್ಟಣ ,ಪುರದ ಗೇಟ್ ,,ಕುಂದನಹಳ್ಳಿ ,,ಹೆಗ್ಗಡಹಳ್ಳಿ .ವಡ್ಡರಹಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಸಮೀಪ ಇರುವ ನಿವಾಸಗಳಿಗೂ ಮನಬಂದAತೆ ಕಚ್ಚಿ ಗಾಯಗೊಳಿಸಿ ಕೋರಮಂಡಲ ಸಕ್ಕರೆ ಕಾರ್ಖಾನೆ ಕಬ್ಬು ಕಟಾವು ಮಾಡಲು ಬಳ್ಳಾರಿಯಿಂದ ಆಗಮಿಸಿರುವ ಕೆಲಕೂಲಿಕಾರ್ಮಿಕರ ಮೇಲೆ ಕೂಡ ವಿಕೃತಮೆರೆದು ಸರಿ ಸುಮಾರು ೪೦ಕ್ಕೂ ಹೆಚ್ಚು ಸಾರ್ವಜನಿಕರ ಮೇಲೆ ತನ್ನ ರೌದ್ರಾವತಾರವನ್ನು ಮೆರೆದಿದೆ ಎಂದು ಸಾರ್ವಜನಿಕರು ತಿಳಿಸಿದರು..
ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಸಾರ್ವಜನಿಕರೆಲ್ಲರೂ ಕೆ ಆರ್ ಪೇಟೆ ಪಟ್ಟಣ ಸಾರ್ವಜನಿಕರ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದು ಹೆಚ್ಚು ಗಾಯಗೊಂಡಿರುವ ಕೆಲ ವೃದ್ಧರು ಮತ್ತು ಸಾರ್ವಜನಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಮುಖಾಂತರ ರವಾನಿಸಲಾಯಿತು…
ತಾಲೂಕಿನಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಅದರ ಮಧ್ಯೆ ಇಂತಹ ಈ ಕ್ರೂರಿ ಹುಚ್ಚುನಾಯಿ ಸರಣಿ ಕಡಿತದಿಂದ ತಾಲೂಕಿನಾದ್ಯಂತ ಸಾರ್ವಜನಿಕರು ಭಯಭೀತರಾಗಿದ್ದಾರೆ ಕೂಡಲೇ ಈ ನಾಯಿನು ಸರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ