ಕೃಷ್ಣರಾಜಪೇಟೆ ತಾಲ್ಲೂಕಿನ ಗಡಿ ಭಾಗವಾದ ಆನೆಗೊಳ ಗ್ರಾಮದ ರೈಸ್ ಮಿಲ್ ಆವರಣದಲ್ಲಿ ಅಪ್ಪಾಜೀಗೌಡರ ಪರ ಕಿಕ್ಕೇರಿ ಹೋಬಳಿಯ ಏಳು ಗ್ರಾಮ ಪಂಚಾಯಿತಿಯ ಸದಸ್ಯರ ಮತ ಯಾಜಿಸಿ ಮಾತನಾಡಿ ಕುಮಾರಣ್ಣನವರು ಮುಖ್ಯಮಂತ್ರಿ ಹಾಗಿದ್ದ ಸಂರ್ಭದಲ್ಲಿ ರೈತರ ಬೆನ್ನೆಲುಬಾಗಿ ನಿಂತಿದ್ದರು ರೈತರಿಗಾಗಿ ಹಲವಾರೂ ಯೋಜನೆಗಳನ್ನು ಕೈಗೂಡಿಸಿಕೊಂಡಿದ್ದರು ಹಾಗೇ ಜೆ.ಡಿ.ಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ೨೦೨೩ಕ್ಕೆ ಮೊತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿಯಾಗಿ ನೋಡವುದೇ ಎಲ್ಲಾರ ಆಶಯವಾಗಿದೆ ಎಂದರು..
ನoತರ ವಿಧಾನ ಪರಿಷತ್ ಅಭ್ಯರ್ಥಿ ಅಪ್ಪಾಜೀಗೌಡ ಮಾತನಾಡಿ ಕಳೆದ ಬಾರಿ ಮಾಜಿ ಪ್ರಧಾನಿ ದೇವೇಗೌಡ್ರು ಮಾಜಿ ಮುಖ್ಯಮಂತ್ರಿ ಕುಮಾರಣ್ಣ ನವರ ಅರ್ಶಿವಾದದಿಂದ ಗೆಲುವು ಸಾಧಿಸಿದೆ ಅದೇ ರೀತಿ ನನ್ನ ಕೈಲಾದ ಸೇವೆಯನ್ನು ಜಿಲ್ಲೆಯ ಜನರಿಗೆ ನೀಡಿದ್ದೇ ಹಾಗೇ ಈ ಬಾರಿ ಮತ್ತೊಮ್ಮೆ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬಂದಿರುವೆ ಎಲ್ಲಾ ಸದಸ್ಯರು ನನಗೆ ಬೆಂಬಲವಾಗಿ ನಿಂತು ಜಿಲ್ಲೆಯ ಜನತೆಯ ಸೇವೆ ಮಾಡಲು ಅವಕಾಶ ಕಲ್ಪಸಿಕೊಡುವಂತೆ ಕೈ ಮುಗಿದು ಮನವಿ ಮಾಡಿದ್ರು…
ಕಾರ್ಯಕ್ರಮದಲ್ಲಿ ಜಿಲ್ಲಾ ಜೆ.ಡಿ.ಎಸ್ ಅದ್ಯಕ್ಷರಾದ ಡಿ ರಮೇಶ್, ತಾಲ್ಲೂಕು ಜೆ.ಡಿ.ಎಸ್ ಘಟಕದ ಅದ್ಯಕ್ಷರಾದ ಜಾನಕಿರಾಮು, ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ತಾಲ್ಲೂಕು ಘಟಕದ ಯುವ ಅದ್ಯಕ್ಷರಾದ ಬಸ್ ಸಂತೋಷ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟಸ್ವಾಮಿಗೌಡ್ರು, ಬಿ.ಎಲ್ ದೇವರಾಜು, ಹೆಚ್ ಟಿ ಮಂಜು, ಎಂ ಡಿ ಸಿ ಸಿ ಬ್ಯಾಕ್ ಉಪಾದ್ಯಕ್ಷ ಆಶೋಕ್, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಹಾಲಿ ನಿರ್ದೇಶಕ ಐನೋರಹಳ್ಳಿ ಮಲ್ಲೇಶ್, ಹೇಮಾವತಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಬೋಳಮಾರನಹಳ್ಳಿ ಮಂಜುನಾಥ್, ಮೆಡಿಕಲ್ ಕಿರಣ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಾರದಮ್ಮ ಕೃಷ್ಣೇಗೌಡ್ರು, ಮುಖಂಡರಾದ ಹಕ್ಕಿಹೆಬ್ಬಾಳು ರಘು, ಗದ್ದೆಹೊಸೂರು ಅಶ್ವಿನ್ ಗೌಡ, ದಯಾನಂದ್ ಪಿ.ಎಲ್.ಡಿ ಬ್ಯಾಕ್ ನಿರ್ದೇಶಕ ಶಂಭು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ್, ಸೇರಿದಂತೆ ನೂರಾರು ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರುಗಳು ಇದ್ದರು…
ವರದಿ: ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ