ಕಿಕ್ಕೇರಿ: ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸಮ ಬಲ ಇದ್ದ ಕಾರಣ ಲಾಟರಿ ಮೂಲಕ ಗಂಗೇನಹಳ್ಳಿ ರಘು (ಗುಂಡ)ರವರು ಜಯಗಳಿಸಿದ್ದಾರೆ
ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗಂಗೇನಹಳ್ಳಿ ಗ್ರಾಮದ ರಘು ರವರು ಅಧ್ಯಕ್ಷರಾಗಿ ಆಯ್ಕೆಯಾದರು..
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ಸಿಹಿ ತಿನ್ನಿಸಿ ಶುಭಕೋರಿದರು ನಂತರ ಮಾತನಾಡಿ ಆಡಳಿತ ಮಂಡಳಿಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿ ವ್ಯಾಪ್ತಿ ಬರುವ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಮುಖೇನ ಅವರ ಆಡಳಿತವನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪುವ ನಿಟ್ಟಿನಲ್ಲಿ ಉತ್ತಮ ಆಡಳಿತ ನೀಡುವಂತೆ ಸಲಹೆ ನೀಡಿದರು..
ಇದೇ ಸಂರ್ಭದಲ್ಲಿ ಮುಖಂಡರಾದ ಎಲ್.ಪಿ ನಂಜಪ್ಪ. ರುಕ್ಮಾಗಂದ, ಶಾಮಣ್ಣ, ಚಂದ್ರೇಗೌಡ, ಹರೀಶ್ ಸೇರಿದಂತೆ ನೂತನ ಅದ್ಯಕ್ಷರಿಗೆ ಶುಭ ಕೋರಿ ಸಿಹಿ ತಿನ್ನಿಸಿ ಶುಭಕೋರಿದರು..
ವರದಿ:ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ