April 23, 2024

Bhavana Tv

Its Your Channel

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕಡು ಬಡವ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಕಿಕ್ಕೇರಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕಡು ಬಡವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಗೃಹ ದಿನಬಳಕೆಯ ಅಗತ್ಯ ವಸ್ತುಗಳ ವಾತ್ಸಲ್ಯ ಕಿಟ್ ಗಳನ್ನು ನೀಡಲಾಯಿತು

ಕೃಷ್ಣರಾಜಪೇಟೆ ತಾಲ್ಲಯುಕಿನ ಸೊಳ್ಳೇಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಗ್ರಾಮದ ಕಡು ಬಡವ ಕುಟುಂಬಗಳ ಗುರುತಿಸಿ ಅವರ ಅವರ ಮನೆಗಳಿಗೆ ತೆರೆಳಿ ಪುಡ್ ಕಿಟ್ ಸೇರಿದಂತೆ ಗೃಹಪಯೋಗ ವಸ್ತುಗಳನ್ನು ನೀಡಲಾಯಿತು ನಂತರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ್ ಮಾತನಾಡಿ ತಾಲೂಕಿನ ವ್ಯಾಪ್ತಿಯ ಬಡಜನರು, ನಿರ್ಗತಿಕರು ಹಾಗೂ ಅನಾಥರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ.ವೀರೇಂದ್ರಹೆಗಡೆ ಅವರು ಕೊಡುಗೆಯಾಗಿ ನೀಡಿದ ದಿನಬಳಕೆಯ ಅಗತ್ಯ ವಸ್ತುಗಳ ವಾತ್ಸಲ್ಯ ಕಿಟ್ ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುತ್ತಾ ಬಂದಿದೆ ಎಂದು ತಿಳಿಸಿದರು..

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಮಮತಾಶೆಟ್ಟಿ, ಕಿಕ್ಕೇರಿ ಭಾಗದ ಯೋಜನಾಧಿಕಾರಿ ವೀರೇಶಪ್ಪ, ಮೇಲ್ವಿಚಾರಕರಾದ ರೇಣುಖಾ, ಮದಲಾಂಬಿಕೆ, ಸೊಳ್ಳೇಪುರ ಶಿಲ್ಪ, ಒಕ್ಕೂಟದ ಅದ್ಯಕ್ಷ ರಾಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಶಂಭು ಕಿಕ್ಕೇರಿ

error: