April 25, 2024

Bhavana Tv

Its Your Channel

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದ ಯು.ಬಿ.ರೇವತಿ

ಕೆ.ಆರ್.ಪೇಟೆ : ನೇಕಾರ ತೊಗಟವೀರ ಸಮಾಜದ ಮುಖಂಡ ಉಂಡಿಗನಹಾಳು ಯು.ಕೆ. ಬಸವರಾಜು ಮತ್ತು ಟಿ.ಆರ್.ಗಾಯತ್ರಿ ದಂಪತಿಗಳಿಗಳ ಪುತ್ರಿ ಕುಮಾರಿ ಯು.ಬಿ.ರೇವತಿ ಅವರು ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮವಾದ ಸಾಧನೆಯನ್ನು ಮಾಡಿದ್ದು 625 ಅಂಕಗಳಿಗೆ 623 ಅಂಕಗಳನ್ನು ಪಡೆಯುವ ಮೂಲಕ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆದಿರುವ ಟಾಪ್ ಟೆನ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ ..

ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿರುವ ರೇವತಿ ಅವರ ಸಾಧನೆಯನ್ನು ಶಾಲೆಯ ಅಧ್ಯಕ್ಷ ಅರವಿಂದರಾವ್, ಆಡಳಿತಾಧಿಕಾರಿ ನಾಗೇಶಬಾಬು, ಕೆ.ಆರ್.ಪೇಟೆಯ ನೇಕಾರ ತೊಗಟವೀರ ಸಮಾಜದ ಮುಖಂಡರಾದ ಹಂಸರಮೇಶ್, ಹೆಚ್.ಎಂ.ಚAದ್ರಶೇಖರ್ ಅಭಿನಂದಿಸಿದ್ದಾರೆ…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: