ಕಿಕ್ಕೇರಿ:- 75 ನೇ ಸ್ವಾತಂತ್ರ್ಯ ಮಹೋತ್ಸವ ಸಮಾರಂಭಕ್ಕೆ ಇಡೀ ದೇಶ ಸಿದ್ದಗೊಂಡಿದೆ, ಯಾವುದೇ ಧರ್ಮ ಗಳಿರಲಿ ಮೊದಲು ದೇಶ ಮೊದಲು ಭಾರತೀಯ ಎಂದು ಹೆಮ್ಮೆಯಿಂದ ಹೇಳಬೇಕು ಎಂದು ಮುಖ್ಯ ಶಿಕ್ಷಕಿಯಾದ ಜ್ಯೋತಿ ನವೀನ್ ರವರು ತಿಳಿಸಿದರು,
ನೆಹರು ಯುವ ಕೇಂದ್ರದಿAದ ನಡೆದ ಹರ್ ಘರ್ ತಿರಂಗಾ ಜಾಗೃತಿ ಆಂದೋಲನ ಹಾಗೂ ಸ್ವಚ್ಚತಾ ಅಭಿಯಾನವು ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಕೋಡಿಮಾರನಹಳ್ಳಿ ಚೈತನ್ಯ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಎಂದು ಜಾಗೃತಿ ಮೂಡಿಸಿದರು, ನೆಹರು ಯುವ ಕೇಂದ್ರದ ಸ್ವಯಂ ಸೇವಕ ಅಲ್ಲಮಪ್ರಭು ಎಸ್ ಎಂ ಮತ್ತು ಕೆ ಪಿ ಉಮಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಧ್ಯಾರ್ಥಿನಿ ಧನಲಕ್ಷ್ಮಿ ಮಾತನಾಡಿ ಮನೆ ಮನೆಗಳಲ್ಲಿ ದೇಶ ಭಕ್ತಿ ಮೊಳಗಿಸಬೇಕು, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರ ಹೋರಾಟಗಾರರನ್ನು ನೆನಪು ಮಾಡಿಕೊಳ್ಳಬೇಕು ಎಂದರು,
ಶಿಕ್ಷಣ ಸಂಯೋಜಕ ಸಿ ವೀರಭದ್ರಯ್ಯನವರು ಮಾತನಾಡಿ ಜಾತಿ ಮತ ಧರ್ಮ ಭಾಷೆ ಬಿಟ್ಟು ನಾವು ಭಾರತೀಯರು ಎಂಬ ಜಾಗೃತಿಯನ್ನು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಂದನೀಯ ಫಾದರ್ ಶಿಬು ಥಾಮಸ್, ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ.ಗೌಡ ಜ್ಯೋತಿ,ತಸ್ಮಿಯಾ ಭಾನು,ಜೋಸ್ವಿನ್, ಬ್ರದರ್ ಜೋಯಲ್, ಸೌಮ್ಯ,ಶೋಭನಾ, ಸರಸ್ವತಿ,ಟಿನ್ಸಿ ಮೋಲ್,ಜೋಸ್ವಿನ್ ಸಬೀನಾ ಮೇರಿ,ಜಸ್ಡೀನ್ ಗ್ರೇಸಿ ಮುಂತಾದವರು ಉಪಸ್ಥಿತರಿದ್ದರು, ಮತ್ತು ಅಪಾರ ಸಂಖ್ಯೆಯ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು,
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ