ಕೃಷ್ಣರಾಜಪೇಟೆ ತಾಲ್ಲೂಕು ಕಸಬಾ ಹೋಬಳಿ, ಹೆಗ್ಗಡಹಳ್ಳಿ ಎಂಬ ಕಂದಾಯ ಗ್ರಾಮದಿಂದ ಕರೋಠಿ’ ಎಂಬ ಹೊಸ ಕಂದಾಯ ಗ್ರಾಮವನ್ನು ರಚಿಸುವ ಸಂಬAಧ ಉಲ್ಲೇಖದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು ಸದರಿ ಆದೇಶದಂತೆ ಕರೋಠಿ ಎಂಬ ಹೊಸ ಕಂದಾಯ ಗ್ರಾಮದಲ್ಲಿನ ವಾಸದ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಬಗ್ಗೆ ತಹಸಿಲ್ದಾರ್ ರೂಪಾ ರವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು
ಆರ್ ಟಿ ಸಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು ಅವರಿಗೆ ಕಾನೂನು ಬದ್ಧವಾಗಿ ಹಕ್ಕು ಪತ್ರ ವಿತರಣೆ ಮಾಡುವ ಉದ್ದೇಶದಿಂದ ಗ್ರಾಮವನ್ನು ಸರ್ವೆ ಮಾಡಿಸಿ ಸೂಕ್ತ ಕ್ರಮ ಕೈಗೊಳಲಾಗುವುದು ಎಂದರು
ಈ ಸಂಧರ್ಭದಲ್ಲಿ ಎ ಡಿ ಎಲ್ ಆರ್ ಪರಶಿವನಾಯಕ್, ರಾಜಸ್ವ ನೀರಿಕ್ಷರಾದ ಚಂದ್ರಕಲಾ, ಮಾಕವಳ್ಳಿ ಗ್ರಾಮ ಪಂಚಾಯತಿಯ ಪಿ ಡಿ ಓ ಶೈಲಜಾ, ಗ್ರಾಮ ಲೆಕ್ಕಾದಿಕಾರಿಗಳಾದ ಪೂಜಾ, ಶ್ವೇತ, ಸ್ಫೂರ್ತಿ, ಮಾಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವೀಣಾ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ್ ಕರೋಟಿ, ಮಹದೇವ್, ವಡ್ಡರಹಳ್ಳಿ ಕುಮಾರ್, ಯೋಗೇಶ್, ಕರೋಠಿ ಗ್ರಾಮದ ಮುಖಂಡರಾದ ಕೆ ಜಿ ಹುಚ್ಚೇಗೌಡ, ರಾಜಶೇಖರ್, ಧರ್ಮರಾಜು, ತಮ್ಮಯ್ಯ ದಿನೇಶ್, ತಿಮ್ಮಗೌಡ, ಪಾಪೇಗೌಡ, ನಂಜುAಡೇಗೌಡ, ಪುಟ್ಟೇಗೌಡ, ಚಂದ್ರೆಗೌಡ, ದೇವರಾಜು, ನಾಗೇಶ್, ವಾಸುದೇವ್, ಲೋಕೇಶ್, ಮುಂತಾದವರು
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ