March 24, 2024

Bhavana Tv

Its Your Channel

ಕರೋಠಿ ಗ್ರಾಮದ ವಾಸದ ಮನೆಗಳಿಗೆ ಹಕ್ಕುಪತ್ರ ವಿತರಿಸುವ ಬಗ್ಗೆ ಗ್ರಾಮದಲ್ಲಿ ತಹಸಿಲ್ದಾರ್ ರೂಪಾ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕೃಷ್ಣರಾಜಪೇಟೆ ತಾಲ್ಲೂಕು ಕಸಬಾ ಹೋಬಳಿ, ಹೆಗ್ಗಡಹಳ್ಳಿ ಎಂಬ ಕಂದಾಯ ಗ್ರಾಮದಿಂದ ಕರೋಠಿ’ ಎಂಬ ಹೊಸ ಕಂದಾಯ ಗ್ರಾಮವನ್ನು ರಚಿಸುವ ಸಂಬAಧ ಉಲ್ಲೇಖದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು ಸದರಿ ಆದೇಶದಂತೆ ಕರೋಠಿ ಎಂಬ ಹೊಸ ಕಂದಾಯ ಗ್ರಾಮದಲ್ಲಿನ ವಾಸದ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಬಗ್ಗೆ ತಹಸಿಲ್ದಾರ್ ರೂಪಾ ರವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು

ಆರ್ ಟಿ ಸಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು ಅವರಿಗೆ ಕಾನೂನು ಬದ್ಧವಾಗಿ ಹಕ್ಕು ಪತ್ರ ವಿತರಣೆ ಮಾಡುವ ಉದ್ದೇಶದಿಂದ ಗ್ರಾಮವನ್ನು ಸರ್ವೆ ಮಾಡಿಸಿ ಸೂಕ್ತ ಕ್ರಮ ಕೈಗೊಳಲಾಗುವುದು ಎಂದರು

ಈ ಸಂಧರ್ಭದಲ್ಲಿ ಎ ಡಿ ಎಲ್ ಆರ್ ಪರಶಿವನಾಯಕ್, ರಾಜಸ್ವ ನೀರಿಕ್ಷರಾದ ಚಂದ್ರಕಲಾ, ಮಾಕವಳ್ಳಿ ಗ್ರಾಮ ಪಂಚಾಯತಿಯ ಪಿ ಡಿ ಓ ಶೈಲಜಾ, ಗ್ರಾಮ ಲೆಕ್ಕಾದಿಕಾರಿಗಳಾದ ಪೂಜಾ, ಶ್ವೇತ, ಸ್ಫೂರ್ತಿ, ಮಾಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವೀಣಾ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ್ ಕರೋಟಿ, ಮಹದೇವ್, ವಡ್ಡರಹಳ್ಳಿ ಕುಮಾರ್, ಯೋಗೇಶ್, ಕರೋಠಿ ಗ್ರಾಮದ ಮುಖಂಡರಾದ ಕೆ ಜಿ ಹುಚ್ಚೇಗೌಡ, ರಾಜಶೇಖರ್, ಧರ್ಮರಾಜು, ತಮ್ಮಯ್ಯ ದಿನೇಶ್, ತಿಮ್ಮಗೌಡ, ಪಾಪೇಗೌಡ, ನಂಜುAಡೇಗೌಡ, ಪುಟ್ಟೇಗೌಡ, ಚಂದ್ರೆಗೌಡ, ದೇವರಾಜು, ನಾಗೇಶ್, ವಾಸುದೇವ್, ಲೋಕೇಶ್, ಮುಂತಾದವರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: