April 24, 2024

Bhavana Tv

Its Your Channel

ಶ್ರೀ ಪಂಚಲಿoಗೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ, ಅಭಿಷೇಕ

ಕಿಕ್ಕೇರಿ:-ಕಾರ್ತಿಕ ಮಾಸದ ಕೊನೇ ಸೋಮವಾರದಂದು ಗೋವಿಂದನಹಳ್ಳಿ ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಾಲಯದಲ್ಲಿ ಡಾಕ್ಟರ್ ಹರ್ಷವರ್ಧನಿ ಮತ್ತು ಗಿರಿಪ್ರಸಾದ್ ರವರು ವಿಶೇಷ ಪೂಜೆ, ಅಭಿಷೇಕ, ಸಲ್ಲಿಸಿದರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಶ್ರೀ ಕ್ಷೇತ್ರ ಗೋವಿಂದನಹಳ್ಳಿ ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಸೊಳ್ಳೇಪುರ ಗ್ರಾಮದ ಚಂದ್ರಿಕಾ ಜವರೇಗೌಡ್ರು, ಮಗನಾದ ಗಿರೀಶ್ ಮತ್ತು ಹರ್ಷವರ್ದಿನ ಕುಟುಂಬಸ್ಥರು ಶ್ರೀ ಪಂಚಲಿAಗೇಶ್ವರ ದೇವಾಲಯದ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವಾಲಯಕ್ಕೆ ಬರುವ ಭಕ್ತರಿಗೆ ಬೆಳಗ್ಗೆ ಇಂದ ಸಂಜೆಯವರೆಗೆ ಅನ್ನ ಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಸುತ್ತಾ ಬಂದಿದ್ದು.ಈ ವರ್ಷ ಸುಮಾರು 2 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಸಿಹಿ ಪೊಂಗಲ್, ಖಾರ ಪೊಂಗಲ್, ಪಲಾವ್, ಮೊಸರನ್ನ ಪ್ರಸಾದವನ್ನು ಸಿದ್ದಪಡಿಸಿ ಬರುವ ಭಕ್ತರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಕಾಶ, ಲೋಕೇಶ್, ಎಸ್ ಎಲ್ ಗೋಪಾಲ್, ನಂಜೇಗೌಡ, ಗುರು ಮೂರ್ತಿ, ಸೇರಿದಂತೆ ಮತ್ತಿತ್ತರರು ಇದ್ದರು

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: