April 24, 2024

Bhavana Tv

Its Your Channel

ಸಿಂಧುಘಟ್ಟ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದ ವೈದ್ಯರು ; ಸಾರ್ವಜನಿಕರ ಆರೋಪ

ಕೆ.ಆರ್.ಪೇಟೆ ತಾಲೂಕಿನ ಬಹುತೇಕ ಸಾರ್ವಜನಿಕ ಆಸ್ಪತ್ರೆಗಳಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾಗಿ ಬರುತ್ತಿಲ್ಲಾ ಎಂಬ ಆರೋಪ ಕೇಳಿಬರುತ್ತಿದೆ.
ತಾಲೂಕಿನ ಸಿಂಧುಘಟ್ಟ ಆಸ್ಪತ್ರೆಗೆ ವೈದ್ಯರು ಪ್ರತಿದಿನ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಿದ್ದು ವೈದ್ಯರು ಇರಲಿ ಒಬ್ಬ ಸಿಬ್ಬಂದಿ ಕೂಡಾ ಆಸ್ಪತ್ರೆಯಲ್ಲಿ ಇರದೆ ಬಾಗಿಲು ತೆಗೆದು ಹೋಗಿದ್ದಾರೆ.
ಈ ಬಗ್ಗೆ ಕೆ.ಆರ್.ಎಸ್ ಪಾರ್ಟಿಯವರು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ಸದರಿ ವೈದ್ಯರು ರಜೆ ಇದ್ದು ಶೀಳನೆರೆ ಗ್ರಾಮದ ಆಸ್ಪತ್ರೆಯ ವೈದ್ಯರನ್ನು ಸಿಂಧುಘಟ್ಟ ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದಾದ ಶೀಳನೆರೆ ಆಸ್ಪತ್ರೆಗೆ ಹೋಗಿ ನೋಡಲಾಗಿ ಅಲ್ಲಿಯೂ ವೈದ್ಯರು ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗೆ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಜನರು ತಿಳಿಸಿದರು.
ಕೆ.ಆರ್.ಎಸ್ ಪಾರ್ಟಿಯವರು ಆಸ್ಪತ್ರೆಗೆ ಬಂದಿದ್ದಾರೆ ಎಂದು ತಿಳಿದ ನಂತರ ಶೀಳನೆರೆ ಆಸ್ಪತ್ರೆಯ ವೈದ್ಯರಾದ ಡಾ.ಆನಂದ ಅವರು ತರಾತುರಿಯಲ್ಲಿ ಹನ್ನೊಂದು ವರೆಯ ವೇಳೆಗೆ ಆಗಮಿಸಿದರು.
ಜನರಿಗೆ ಆರೋಗ್ಯ ಕಾಪಾಡುವ ವೈದ್ಯರೇ ಕರ್ತವ್ಯಕ್ಕೆ ಸರಿಯಾಗಿ ಬಾರದೇ ಇರುವುದು ದುರಂತವೇ ಸರಿ ಎಂದು ಕೆ.ಆರ್.ಎಸ್ ಪಕ್ಷದ ಸದಸ್ಯರು ಆಕ್ರೊಷ ವ್ಯಕ್ತ ಪಡಿಸಿದ್ದಾರೆ.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: