April 26, 2024

Bhavana Tv

Its Your Channel

ಸಾರಿಗೆ ನೌಕರರ ಕುಟುಂಬದ ಹೋರಾಟದಲ್ಲಿ ಶಾಸಕ ಸುರೇಶ್ ಗೌಡ ಭಾಗಿ

ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ರಾಜ್ಯ ಸರ್ಕಾರದ ವಿರುದ್ದ ನೌಕರರ ಕುಟುಂಬ ಸದಸ್ಯರೊಂದಿಗೆ ಪ್ರತಿಭಟನೆ ಭಾಗಿಯಾದರು.೬ನೇ ವೇತನ ಜಾರಿಯಾಗಬೇಕು ಎಂಬ ನಾಮಫಲಕ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ.ನಾಗಮಂಗಲ ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಕುಟುಂಬ ಸದಸ್ಯರು.ನೌಕರರು ಪತ್ನಿ, ಮಕ್ಕಳು ಹಾಗೂ ಕುಟುಂಬ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿ.ಶಾಸಕ ಸುರೇಶ್ ಗೌಡ ಹಾಗೂ ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು.

ಶಾಸಕ ಸುರೇಶ್ ಗೌಡ ಮಾತನಾಡಿ, ಸರ್ಕಾರ ನೌಕರರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ.ನೌಕರರ ಪರವಾಗಿ ನಮ್ಮ ಜೆಡಿಎಸ್ ಪಕ್ಷ ಹೋರಟಕ್ಕೆ ಸಿದ್ಧವಿದೆ.ನೌಕರರು ಯಾವುದೇ ಅಹಿತಕರ ಘಟನೆ ಹಾಗೂ ಆತ್ಮಹತ್ಯೆಯಂತಹ ಘಟನೆಗಳಿಗೆ ಮನಸ್ಸು ಮಾಡಬಾರದು. ನೌಕರರಿಗೆ ನ್ಯಾಯ ಸಿಗಲೇಬೇಕು ಎಂದು ಒತ್ತಾಯಿಸಿದ ಶಾಸಕ.

ನೌಕರನ ಪುತ್ರನ ಅಳಲು:
ಡ್ರೈವರ್ , ಕಂಡಕ್ಟರ್ ಮಕ್ಕಳು ಓದಬಾರದ?

ನಮಗೆ ಹಬ್ಬಕ್ಕೆ ಬಟ್ಟೆ ಕೊಡಿಸಲು ನಮ್ಮ ಅಪ್ಪನಿಗೆ ಆಗುತ್ತಿಲ್ಲ, ಬುಕ್ ಕೊಡಿಸಿ ಅಂದ್ರೆ ಸಂಬಳ ಆಗಿಲ್ಲ ಎನ್ನುತ್ತಿದ್ದಾರೆ.ನಾವು ಓದುವುದು ಬೇಡವೇ, ಸರ್ಕಾರ ನಡೆಸುವವರ ಮಕ್ಕಳು ಮಾತ್ರ ಓದಬೇಕೇ? ಎಂದು ನೌಕರನ ಪುತ್ರ ಮಿಥುನ್ ಬಾಲಾಜಿ ತನ್ನ ಅಳಲು ತೋಡಿಕೊಂಡ ಪುಟಾಣಿ

error: