ಮಂಡ್ಯ: ಜಿಲ್ಲೆಯ ನಾಗಮಂಗಲ ಪುರಸಭೆ ವ್ಯಾಪ್ತಿಯ ಕೆ.ಮಲ್ಲೇನಹಳ್ಳಿ ಗ್ರಾಮ ೨೩ ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರು ಘಟಕವನ್ನು ಪುರಸಭೆ ಅಧ್ಯಕ್ಷರಾದ ಆಶಾ ವಿಜಯಕುಮಾರ್ ಉಪಾಧ್ಯಕ್ಷ ಜಾಫರ್ ಶರೀಫ್ ಹಾಗೂ ೨೩ನೇ ವಾರ್ಡಿನ ಪುರಸಭೆ ಸದಸ್ಯರಾದ ಚನ್ನಪ್ಪನವರು ಉದ್ಘಾಟನೆ ಮಾಡಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ಚನ್ನಪ್ಪನವರು ಮಲ್ಲೇನಹಳ್ಳಿ ಗ್ರಾಮ ಸುತ್ತಮುತ್ತಲು ಹತ್ತಾರು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದ್ದ ಇಲ್ಲಿ ಒಂದು ಶುದ್ಧ ಕುಡಿಯುವ ನೀರು ಘಟಕ ಅವಶ್ಯಕತೆ ಇದ್ದುದ್ದರಿಂದ ಸಾರ್ವಜನಿಕರ ಬಹುಬೇಡಿಕೆ ಯನ್ನು ಮನಗಂಡು ಪುರಸಭೆ ಸಹಕಾರದೊಂದಿಗೆ ಈ ದಿನ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆ ಮಾಡಲಾಗಿದೆ ಸುತ್ತಮುತ್ತಲ ಗ್ರಾಮಸ್ಥರು ಈ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಭಾಕರ್. ಮಂಜುನಾಥ್. ಮಂಜಣ್ಣ ಮುಖಂಡರಾದ ಬಸವೇಗೌಡ ಗ್ರಾಮದ ಮುಖಂಡರು ಭಾಗವಹಿಸಿದ್ದರು
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ