March 29, 2024

Bhavana Tv

Its Your Channel

ನಿಂತಿದ್ದ ಟ್ಯಾಂಕರ್ ಲಾರಿಗೆ ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಮಂಡ್ಯ: ಜಿಲ್ಲೆಯ ನಾಗಮಂಗಲ ಪಟ್ಟಣದ ತೊಳಲಿ ಸಮೀಪ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ನಡೆದಿರೋ ಅಪಘಾತ. ತುಮಕೂರು ಜಿಲ್ಲೆ, ತುರುವೆಕೆರೆ ತಾಲ್ಲೂಕು, ಮಾಯಸಂದ್ರ ಸಮೀಪದ ಕೋಡಿನಾಗಸಂದ್ರ ಗ್ರಾಮದ ವಿನಯ್(೨೭) ಎಂಬ ಅವಿವಾಹಿತ ಯುವಕನೇ ಮೃತಪಟ್ಟಿರುವ ದುರ್ದೈವಿ. ನಾಗಮಂಗಲದ ಕೊಡಕ್ ಮಹೇಂದ್ರ ಫೈನಾನ್ಸ್ ನಲ್ಲಿ ಕೆಲಸ ಮಾಡುತಿದ್ದ ಮೃತ ಯುವಕ. ಬ್ರೇಕ್ ಜಾಮ್ ತೊಂದರೆಯಿAದ ನಿಂತಿದ್ದ ಎಚ್.ಪಿ ಗ್ಯಾಸ್ ಟ್ಯಾಂಕರ್ ಲಾರಿಗೆ ಹಿಂಬದಿಯಿAದ ಡಿಕ್ಕಿ ಹೊಡೆದಿರುವ ಬೈಕ್ ಸವಾರ. ನಾಗಮಂಗಲದಿAದ ಮನೆಗೆ ತೆರಳುವಾಗ ಸಂಭವಿಸಿರೋ ಘಟನೆ, ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: