ಮಂಡ್ಯ: ನಾಗಮಂಗಲ ಕೃಷಿ ಇಲಾಖೆಯಲ್ಲಿ ಭಾರಿ ಗೊಲ್ ಮಾಲ್ ನಡೆದಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ಅಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಕೃಷಿ ಇಲಾಖೆ ಹಣಕಾಸು ಅನುಮೋದನೆ ವೇಳೆ ಹಾಜರಿದ್ದ ಇಲಾಖೆ ಅಧಿಕಾರಿ ಯುವರಾಜ್ ವಿರುದ್ಧ. ದಾಸೇಗೌಡರು ಹರಿಹಾಯ್ದಿದ್ದಾರೆ. ಕೃಷಿ ಇಲಾಖೆಯಲ್ಲಿ ನಿಜವಾದ ರೈತರಿಗೆ ಯಾವುದೇ ಯೋಜನೆಗಳ ಅನುಕೂಲ ಸಿಕ್ಕಿಲ್ಲ ಕಮಿಷನ್ ಪಡೆದು ಬೇರೊಬ್ಬರಿಗೆ. ಕಾಮಗಾರಿ ನಿರ್ವಹಣೆ ನೀಡಲಾಗಿದೆ, ಚೆಕ್ ಡ್ಯಾಂ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ ಭಾರಿ. ಭ್ರಷ್ಟಾಚಾರ ನಡೆದಿದೆ
ಅಭಿವೃದ್ಧಿ ಕಾಮಗಾರಿಗಳು ಕಮಿಷನ್ ಕೊಡುವವರ ಪಾಲಾಗುತ್ತಿವೆ. ಈ ಕಾರಣಕ್ಕೇ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಣಕಾಸು ಸಮಿತಿ ಸಭೆಗೆ ಗೈರಾಗಿದ್ದಾರೆ. ತಡೆಗೋಡೆ ಕಾಮಗಾರಿಯೊಂದಕ್ಕೆ ಎರಡು ಲಕ್ಷ ಕಮಿಷನ್ ಪಡೆದಿರೂ ಬಗ್ಗೆ ನನ್ನಲ್ಲಿ ಖಚಿತ ಮಾಹಿತಿ ಇದೆ ಅವಶ್ಯಕತೆ ಇಲ್ಲದೆ ಕಡೆಯಲ್ಲಿ ತಡೆಗೋಡೆ ಕಾಮಗಾರಿ ನಡೆದಿವೆ ಇದಕ್ಕೆ ಉದಾಹರಣೆ ಕೊಡ ಬಲ್ಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಸಹಾಯ ನಿರ್ದೇಶಕರ. ಪರವಾಗಿ ಹಾಜರಿದ್ದ ಕೃಷಿ ಇಲಾಖೆ ಅಧಿಕಾರಿ ಯುವರಾಜ್ ಆರೋಪ ನಿರಾಕರಿಸಿದ್ದಕ್ಕೆ ನೀನು ಸರಿಯಾದ ಮಾಹಿತಿ ಇದ್ದರೆ ಮಾತನಾಡು ಇಲ್ಲವೇ ತೆಪ್ಪಗಿರು ಎಂದು ಕಿಡಿಕಾರಿದರು.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ