April 20, 2024

Bhavana Tv

Its Your Channel

ಶವ ಸಂಸ್ಕಾರದ ನಂತರ ಸ್ನಾನ ಮಾಡಲೆಂದು ಕೆರೆಗೆ ಇಳಿದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ

ಮಳವಳ್ಳಿ : ಶವ ಸಂಸ್ಕಾರದ ನಂತರ ಸ್ನಾನ ಮಾಡಲೆಂದು ಕೆರೆಗೆ ಇಳಿದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ತಾನೂ ಶವವಾಗಿ ಹೋದ ದುರ್ಘಟನೆಯೊಂದು ಮಳವಳ್ಳಿ ತಾಲ್ಲೂಕಿನ ದ್ಯಾವಪಟ್ಟಣ ಗ್ರಾಮದಿಂದ ವರದಿಯಾಗಿದೆ.
ಈ ಗ್ರಾಮದ ನಿಂಗಣ್ಣ ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದು ಟ್ರ‍್ಯಾಕ್ಟರ್ ನಿಂಗಣ್ಣ ಎಂದೇ ಚಿರಪರಿಚಿತರಾಗಿದ್ದ ಸುಮಾರು ೩೮ ವರ್ಷ ವಯಸ್ಸಿನ ಇವರ ಶವ ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ಕೆರೆಯಲ್ಲಿ ಪತ್ತೆಯಾಗಿದೆ.

ನೆನ್ನೆ ಸೋಮವಾರ ಗ್ರಾಮದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದು ಗ್ರಾಮದಲ್ಲಿ ಯಾರೇ ಮೃತಪಟ್ಟರು ಸ್ವತಃ ಮುಂದೆ ನಿಂತು ಅವರ ಅಂತ್ಯ ಕ್ರಿಯಾದಿಗಳನ್ನು ಸಂಪೂರ್ಣ ವಾಗಿ ನೆರವೇರಿಸುತ್ತ ಗ್ರಾಮಸ್ಥರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ನಿಂಗಣ್ಣ ನೆನ್ನೆ ಸಹ ಮೃತನ ಅಂತ್ಯಕ್ರಿಯೆ ಮುಗಿಸಿ ಗ್ರಾಮದ ಹೊರವಲಯದ ಕೆರೆಯಲ್ಲಿ ಸ್ನಾನ ಮಾಡಲು ಇಳಿದಾಗ ನೀರು ಆಳವಾಗಿದ್ದ ಜಾಗದಲ್ಲಿ ಈಜಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ವರದಿಯಾಗಿದೆ. ಮೃತ ನಿಂಗಣ್ಣ ನಾಲ್ಕು ಹೆಣ್ಣುಮಕ್ಕಳ ತಂದೆಯಾಗಿದ್ದು ಪತ್ನಿ ಕೊನೆ ಮಗುವಿಗೆ ಈಗಷ್ಟೇ ನಾಲ್ಕು ತಿಂಗಳ ಬಾಣಂತಿ ಎಂದು ಗೊತ್ತಾಗಿದೆ. ಇವರ ನಿಧನಕ್ಕೆ ಮೃತನ ಸಂಬAಧಿಯೂ ಆದ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದ್ಯಾವಪಟ್ಟಣ ಯತೀಶ್ ಸೇರಿದಂತೆ ಹಲವಾರು ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ವರದಿ :ಮಲ್ಲಿಕಾರ್ಜುನಸ್ವಾಮಿ
ಮಳವಳ್ಳಿ ತಾಲೂಕು ವರದಿಗಾರರು, ಮಂಡ್ಯ ಜಿಲ್ಲೆ

error: