ಕೆ.ಆರ್.ಪೇಟೆ: ತಾಲ್ಲೂಕಿನ ಕೊರಟೀಕೆರೆ ಬಳಿಯ ಕನ್ನೇಶ್ವರ ದೇವಾಲಯ ಬಳಿ ಬೆಳಿಗ್ಗೆ ೩ಗಂಟೆಗೆ ವಿವಾಹ ಮಾಡಲು ಸಕಲ ಸಿದ್ದತೆ ವಿಷಯ ತಿಳಿದು ಕಿಕ್ಕೇರಿ ಪೋಲೀಸರು ಬರುವಷ್ಟರಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕೋಸಹಳ್ಳಿಯ ದೊಡ್ಡಕೇರಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿ ವಿವಾಹಕ್ಕೆ ಯತ್ನ, ಈ ವಿಚಾರ ತಿಳಿದು ಕೆ.ಆರ್.ಪೇಟೆ ಪಟ್ಟಣ ಪೋಲೀಸರು ಬರುವ ಸುಳಿವು ಅರಿತು ಪರಾರಿಯಾದ ವಧೂ ವರರ ಸಂಬAಧಿಕರು.
ಅಪ್ರಾಪ್ತ ಬಾಲಕಿಯ ಕೋಣನಕೊಪ್ಪಲು ಗ್ರಾಮದ ನಿವಾಸಿಗಳಾದ ಅಜ್ಜ ಮರೀಗೌಡ, ಅಜ್ಜಿ ಶಾಂತಮ್ಮ, ದೊಡ್ಡಪ್ಪ ಶಿಕ್ಷಕ ರವಿ, ಚಿಕ್ಕಮ್ಮ, ಲಕ್ಷ್ಮೀ, ಜಾಗಿನಕೆರೆ ನಿವಾಸಿಗಳಾದ ಪರಮೇಶ್ ಮತ್ತು ರಜನಿ ಹಾಗೂ ಗೋವಿಂದೇಗೌಡನ ಕೊಪ್ಪಲು ಗ್ರಾಮದ ವರ ಮಹೇಶ್(೩೬)ಮತ್ತು ಈತನ ಪೋಷಕರು ಸೇರಿ ಸುಮಾರು ೩೦ಮಂದಿ ಸೇರಿಕೊಂಡು ಚಿಲ್ಲದಹಳ್ಳಿ ಗ್ರಾಮದ ೧೬ವರ್ಷದ ಅಪ್ರಾಪ್ತ ಬಾಲಕಿಯನ್ನು ೩೬ವರ್ಷದ ಮಹೇಶನಿಗೆ ವಿವಾಹ ಮಾಡಲು ಯತ್ನ.
ವಿಷಯ ತಿಳಿದು ಬಾಲಕಿಯ ತಂದೆ ಚಿಲ್ಲದಹಳ್ಳಿ ಪರಮೇಶ್ ಅವರಿಂದ ಮಕ್ಕಳ ಸಹಾಯವಾಣಿ ಹಾಗೂ ತಹಸೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ದೂರವಾಣಿ ಮೂಲಕ ದೂರು. ಕೂಡಲೇ ದೌಡಾಯಿಸಿದ ಪೋಲೀಸರು ಮದುವೆ ಮಾಡಲು ಯತ್ನಿಸುತ್ತಿದ್ದ ಸ್ಥಳಕ್ಕೆ ಬೇಟಿ.
ಪೋಲೀಸರ ದಾಳಿಗೆ ಬೆದರಿ ಜಾಗಿನಕೆರೆ ಗ್ರಾಮದಲ್ಲಿ ಬಚ್ಚಿಟ್ಟುಕೊಂಡಿದ್ದ ಬಾಲಕಿಯ ಅಜ್ಜ, ಅಜ್ಜಿ ಸೇರಿದಂತೆ ಹಲವರನ್ನು ಬಂಧಿಸಿದ ಕೆ.ಆರ್.ಪೇಟೆ ಟೌನ್ ಪೋಲೀಸರು. ಅಜ್ಞಾತ ಸ್ಥಳದಲ್ಲಿ ವರನ ಜೊತೆಯಲ್ಲಿದ್ದ ವಧು ಅಪ್ರಾಪ್ತ ಬಾಲಕಿಯನ್ನು ಕರೆ ತಂದು ವಿವಾಹ ನಿಲ್ಲಿಸಿದ ಪೋಲೀಸರು. ವರನ ಪತ್ತೆಗಾಗಿ ಹುಡುಕಾಟ ಮುಂದುವರೆಸಿರುವ ಕೆ.ಆರ್.ಪೇಟೆ ಟೌನ್ ಪೋಲೀಸರು.
ವರದಿ: ಅಗ್ರಹಾರಬಾಚಳ್ಳಿ ಶ್ರೀನಿವಾಸ
More Stories
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ
ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು
ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯವರಿಗೆ ವಿಶೇಷ ಪೂಜೆ