April 20, 2024

Bhavana Tv

Its Your Channel

ಮಕ್ಕಳು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದ ಗಣೇಶಮೂರ್ತಿಯು ಬೆಳ್ಳಂಬೆಳಗ್ಗೆ ಕಳವು;

ಕೃಷ್ಣರಾಜಪೇಟೆ ; ಪಟ್ಟಣದ ಅಗ್ರಹಾರ ಬಡಾವಣೆಯ ಶ್ರವಣಬೆಳಗೊಳದ ರಸ್ತೆಯಲ್ಲಿ ಮಕ್ಕಳು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದ ಗಣೇಶಮೂರ್ತಿಯು ಬೆಳ್ಳಂಬೆಳಗ್ಗೆ ಕಳವು ಮಾಡಿದ್ದಾರೆ, ಮಕ್ಕಳ ಮನಸ್ಸಿಗೆ ನೋವುಂಟು ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷ್ಣರಾಜಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯ ಶ್ರವಣಬೆಳಗೊಳದ ರಸ್ತೆಯಲ್ಲಿ ಮಕ್ಕಳು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ರವಿವಾರ ಬೆಳಗ್ಗೆ ಗಣಪತಿ ಮೂರ್ತಿಯನ್ನು ಕಳವು ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ,

ಈ ಘಟನೆಯಿಂದಾಗಿ ಸುತ್ತಮುತ್ತಲಿನ ಮಹಿಳೆಯರು ಹಿಡಿಶಾಪ ಹಾಕುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ,

ಅಗ್ರಹಾರದ ಹಿರಿಯ ಮುಖಂಡರಾದ ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರು ಮಾತನಾಡಿ ಕೃಷ್ಣರಾಜಪೇಟೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಈ ಘಟನೆ ನಡೆದಿದ್ದು ಮಕ್ಕಳಿಗೆ ನಿರಾಶೆ ಗೊಳಿಸಿರುವುದು ನೋವನ್ನುಂಟು ಮಾಡಿದೆ, ಈ ರೀತಿಯ ಕಳ್ಳತನವನ್ನು ಯಾರೂ ಮಾಡಬಾರದೆಂದು ಅಗ್ರಹಾರದ ನಿವಾಸಿಗಳು ಮನವಿ ಮಾಡಿದರು.

ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ, ಮಂಡ್ಯ.

error: