ಕೆ.ಆರ್.ಪೇಟೆ: ಕೆ.ಆರ್.ಪೇಟೆ ಪಟ್ಟಣದ ಟೌನ್ ಕ್ಲಬ್ ಮುಂಭಾಗ ಸೈಫ್ ಚಿಕನ್ ಸೆಂಟರ್ ಬಳಿ ಮೋಟಾರ್ ಬೈಕ್ ಹೆಡ್ ಲೈಟ್ ಡೂಮ್ ನೊಳಗೆ ಅವಿತಿದ್ದ ಬಿಲ್ಲೂರಿ ಹಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಣೆ ಮಾಡಿದ ಉರಗತಜ್ಞ ಸ್ನೇಕ್ ಮುನ್ನಾ..ನಾಗರಿಕರ ಸಂತಸ..
ಕೆ.ಆರ್.ಪೇಟೆ ಪಟ್ಟಣದ ಟೌನ್ ಕ್ಲಬ್ ಮುಂಭಾಗದಲ್ಲಿರುವ ಸೈಫ್ ಚಿಕನ್ ಸೆಂಟರ್ ಮುಂಭಾಗದಲ್ಲಿ ಹೀರೋ ಹೋಂಡ ಫ್ಯಾಷನ್ ಮೋಟಾರ್ ಬೈಕಿನ ಹೆಡ್ ಲೈಟ್ ಡೂಮ್ ನೊಳಗೆ ಅವತಿದ್ದ ಸುಮಾರು ೮ ತಿಂಗಳು ಪ್ರಾಯದ ಒಂದು ಮಾರುದ್ದದ ಬಿಲ್ಲೂರಿ ಹಾವನ್ನು ಹಿಡಿದು ಸಂರಕ್ಷಣೆ ಮಾಡಿದ ಉರಗತಜ್ಞ ಸ್ನೇಕ್ ಮುನ್ನಾ..
ಚಿಕನ್ ಕೊಳ್ಳಲು ಬಂದಿದ್ದ ಗ್ರಾಹಕರ ಮೋಟಾರ್ ಬೈಕಿನ ಡೂಮ್ ನೊಳಗೆ ಹಾವೊಂದು ಅವಿತಿರುವುದನ್ನು ಗಮನಿಸಿದ ಸೈಫ್ ಚಿಕನ್ ಸೆಂಟರ್ ಮಾಲೀಕರಾದ ರಿಯಾಜ್ ಕೂಡಲೇ ಸ್ನೇಕ್ ಮುನ್ನಾ ಅವರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಮುನ್ನಾ ಕಾರ್ಯಾಚರಣೆ ನಡೆಸಿ ಬಿಲ್ಲೂರಿ ಹಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಣೆ ಮಾಡಿದರು. ಈ ಹಾವನ್ನು ರಾಯಸಮುದ್ರ ಅರಣ್ಯ ಪ್ರದೇಶದಲ್ಲಿ ಬಿಡುವುದಾಗಿ ಪತ್ರಕರ್ತರಿಗೆ ತಿಳಿಸಿದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
More Stories
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ
ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು
ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯವರಿಗೆ ವಿಶೇಷ ಪೂಜೆ