April 23, 2024

Bhavana Tv

Its Your Channel

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಚಿವ ಗೋಪಾಲಯ್ಯ ರವರನ್ನು ನೇಮಕ ಮಾಡಿರುವುದನ್ನು ಸ್ಥಳೀಯ ಮುಖಂಡ ಬೂಕನಕೆರೆ ರಾಜೇಶ್ ಸ್ವಾಗತಿಸಿದ್ದಾರೆ

ಕೃಷ್ಣರಾಜಪೇಟೆ:– ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಕ್ರಿಯಾಶೀಲ ಸಚಿವರಾಗಿ ಕೆಲಸ ಮಾಡುತ್ತಿರುವ ಗೋಪಾಲಯ್ಯ ಅವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿರುವ ಮುಖ್ಯಮಂತ್ರಿಗಳು ಒಕ್ಕಲಿಗರು ಹಾಗೂ ರೈತಾಪಿ ವರ್ಗದ ಪ್ರಾಭಲ್ಯವೇ ಹೆಚ್ಚಾಗಿರುವ ಮಂಡ್ಯ ಜಿಲ್ಲೆಗೆ ಹಾಸನದ ಜೊತೆಗೆ ಮಂಡ್ಯ ಜಿಲ್ಲೆಗೂ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಹೆಚ್ಚಿನ ಜವಾಬ್ಧಾರಿ ನೀಡಿರುವುದು ಮಂಡ್ಯ ಜಿಲ್ಲೆಯ ಹಿರಿಮೆಗೆ ಹಾಗೂ ಸಚಿವ ಗೋಪಾಲಯ್ಯ ಅವರ ಕಾರ್ಯದಕ್ಷತೆಗೆ ಗರಿಮೂಡಿಸಿದೆ ಎಂದು ಅಭಿನಂದಿಸಿರುವ ಬೂಕನಕೆರೆ ರಾಜೇಶ್ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೋಪಾಲಯ್ಯ ಅವರು ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಜೊತೆಗೆ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಿ ಸಾಧಿಸಿ ತೋರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: