April 19, 2024

Bhavana Tv

Its Your Channel

ಮಾತೃಭೂಮಿ ವೃದ್ಧಾಶ್ರಮದಲ್ಲಿ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟು ಹಬ್ಬ ಆಚರಣೆ

ಕೆ.ಆರ್.ಪೇಟೆಯ ಮಾತೃಭೂಮಿ ವೃದ್ಧಾಶ್ರಮದಲ್ಲಿ ಜೆಡಿಎಸ್ ಯುವನಾಯಕ, ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟು ಹಬ್ಬ ಆಚರಣೆ ..

ಭಾರತ ದೇಶದ ಸೂರ್ಯ, ಕನ್ನಡಿಗರ ಹೆಮ್ಮೆಯ ಮಾಜಿಪ್ರಧಾನ ಮಂತ್ರಿಗಳು ಹಾಗೂ ಅನ್ನಧಾತರಾದ ರೈತರ ಉಸಿರಾಗಿರುವ ಹೆಚ್.ಡಿ.ದೇವೇಗೌಡರ 90 ನೇ ವರ್ಷದ ಹುಟ್ಟು ಹಬ್ಬವನ್ನು ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ನೇತೃತ್ವದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿ ರಸ್ತೆಯಲ್ಲಿರುವ ಮಾತೃಭೂಮಿ ನಿರ್ಗತಿಕರು, ವಯೋವೃದ್ಧರು, ಮಹಿಳೆಯರು ಹಾಗೂ ಅನಾಥರಿಗೆ ಬಟ್ಟೆಬರೆ ಹಾಗೂ ಊಟ ಬಡಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು…

ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ತಾಯಿ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವೇಗೌಡರು ಶತಾಯುಷಿಗಳಾಗಿ ಸುದೀರ್ಘವಾಗಿ ಆರೋಗ್ಯವಂತರಾಗಿ ಸಮೃದ್ಧ ಜೀವನ ನಡೆಸುವ ಶಕ್ತಿಯನ್ನು ದೇವಿಯು ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಸಂತೋಷ್ ಕುಮಾರ್ ಪ್ರಾರ್ಥಿಸಿದರು..

ಜೆಡಿಎಸ್ ಮುಖಂಡ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷರಾದ ಬಿ.ಎಲ್.ದೇವರಾಜು, ರಾಜ್ಯ ಜೆಡಿಎಸ್ ಮುಖಂಡ ಬಸ್ ಕೃಷ್ಣೇಗೌಡ, ಪಿಎಲ್ ಡಿ ಬ್ಯಾಂಕ್ ಮಾಜಿನಿರ್ದೇಶಕ ಎ.ಆರ್.ರಘು, ವಕೀಲರ ಸಂಘದ ಮಾಜಿಅಧ್ಯಕ್ಷ ಎಂ.ಎಲ್.ಸುರೇಶ್, ಎಪಿಎಂಸಿ ಮಾಜಿನಿರ್ದೇಶಕ ಶಶಿಧರ್ ಸಂಗಾಪುರ, ನೋಟರಿಯವರಾದ ಹೆಚ್.ಆರ್.ಕೃಷ್ಣಕುಮಾರ್ ಮುಖಂಡ ಎ.ಎಂ.ಸAಜೀವಪ್ಪ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿ ದೇವೇಗೌಡರ ಪರವಾಗಿ ಜಯಘೋಷಗಳನ್ನು ಕೂಗಿದರು..

ಮಾತೃಭೂಮಿ ವೃದ್ಧಾಶ್ರಮದಲ್ಲಿರುವ ಐವತ್ತಕ್ಕೂ ಹೆಚ್ಚಿನ ನಿರ್ಗತಿಕರು ಹಾಗೂ ಅನಾಥ ಮಹಿಳೆಯರಿಗೆ ಟೀ ಶರ್ಟ್ ಗಳು ಹಾಗೂ ಸೀರೆಗಳನ್ನು ವಿತರಿಸಿದ ಸಂತೋಷ್ ಕುಮಾರ್ 89 ವಸಂತ ಸಂಪೂರ್ಣಗೊಳಿಸಿ 90ನೇ ವರ್ಷಕ್ಕೆ ಕಾಲಿಟ್ಟಿರುವ ದೇವೇಗೌಡರು ನೂರ್ಕಾಲ ಆರೋಗ್ಯವಾಗಿರುವಂತೆ ಪ್ರಾರ್ಥಿಸಲಾಯಿತು.
ರೈತನಾಯಕ, ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ವೃದ್ಧಾಶ್ರಮದಲ್ಲಿ ಅನಾಥರು ಹಾಗೂ ನಿರ್ಗತಿಕ ಮಹಿಳೆಯರೊಂದಿಗೆ ಆಚರಿಸಿದ್ದು ತಾಲ್ಲೂಕಿನ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು..

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: