ಕಿಕ್ಕೇರಿ: ಎಸ್ಕೆಎಸ್ಸಿ ಕುಟುಂಬದ ಸದಸ್ಯನಾಗಿದ್ದ ಸಾದೀಕ್ ಪಾಷರವರ ಸವಿ ನೆನಪಿಗಾಗಿ ಷಟಲ್ ಟೂರ್ನಮೆಂಟ್ ಆಯೋಜಿಸಲಾಗಿತ್ತು
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಎಸ್ಕೆಎಸ್ಸಿ ಷಟಲ್ ಟೂರ್ನಮೆಂಟ್ ಸರ್ವ ಸದಸ್ಯರ ಸಹಕಾರದೊಂದಿಗೆ ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಷಟಲ್ ಟೂರ್ನಮೆಂಟ್ ನ್ನು ಆಯೋಜಿದ್ದು ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವನ್ನು ಸೊಳ್ಳೇಪುರ ಕೇಶವಮೂರ್ತಿ, ದಿನೇಶ್ ಬಾಬು ರವರ ತಂಡಕ್ಕೆ, ದ್ವಿತೀಯ ಬಹುಮಾನ ಕುಮಾರಸ್ವಾಮಿ, ಯೋಗಣ್ಣ ರವರ ತಂಡಕ್ಕೆ, ತೃತೀಯ ಬಹುಮಾನ ರಘು ಗುಂಡ, ಮೀಸೆ ಮಂಜಣ್ಣ, ತಂಡಕ್ಕೆ ನಾಲ್ಕನೇ ಬಹುಮಾನ.ಹೇಮಣ್ಣ, ಬೋಜೇಗೌಡ ತಂಡದವರು ವಿಜೇತರಾದರು..
ಈ ಸಂದರ್ಭದಲ್ಲಿ ಧರ್ಮಪ್ಪ ಮಾತನಾಡಿ ನಮ್ಮ ಎಸ್ಕೆಎಸ್ಸಿ ಟೂರ್ನಮೆಂಟ್ ಸಂಘಟನೆಯಲ್ಲಿ ಕ್ರೀಯಾ ಶೀಲವಾಗಿ ಇದ್ದ ಸಾದೀಕ್ ಪಾಷ ಮಹಾಮಾರಿ ಕೊರೋನಾ ತುತ್ತಾಗಿದ್ದು ಅವರ ಸ್ಮರಣಾರ್ಥವಾಗಿ ಇಂದು ಷಟಲ್ ಟೂರ್ನಮೆಂಟ್ಆಯೋಜಿಸಲಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಸ್ನೇಹ ಜೀವಿಯಾದ ಸಾಧೀಕ್ ಪಾಷ ರವರ ಆತ್ಮಕ್ಕೆ ಶಾಂತಿ ಸಿಗಲಿ ಜೊತೆಗೆ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು..
ಕಾರ್ಯಕ್ರಮಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಏಜಸ್ ಪಾಷ, ಆಕ್ಬರ್ ಪಾಷ, ಸಿಧೀಕ್ ಪಾಷ, ಹಾಗೂ ಎಸ್ಕೆಎಸ್ಸಿ ನ ಕುಂಟುಬದ ಸರ್ವ ಸದಸ್ಯರುಗಳು ಇದ್ದರು
ವರದಿ ಶಂಭು ಕಿಕ್ಕೇರಿ
More Stories
ಕೆ.ಆರ್.ಪೇಟೆಯಲ್ಲಿ ಚಂಪಾ ಷಷ್ಠಿಯ ಸಂಭ್ರಮ, ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ
ನಾಳೆ ನಡೆಯಬೇಕಿದ್ದ ಜನಸ್ಪಂದನಾ ಸಭೆ ಅನಿರ್ಧಿಷ್ಠಾವಧಿ ಮುಂದೂಡಿಕೆ
ರಾಜ್ಯದಲ್ಲೇ ಪ್ರಥಮ ಸೌರ ಶಕ್ತಿ ಆಧಾರಿತ ಮಕ್ಕಳ ಹಾಲುಣಿಸುವ ಕೊಠಡಿ ಉದ್ಘಾಟನೆ