ಕಿಕ್ಕೇರಿ: ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿರವರ ಅಪ್ಪಟ ಅಭಿಮಾನಿಯೊಬ್ಬನ ಹುಟ್ಟು ಹಬ್ಬವನ್ನು ಕರ್ನಾಟಕ ಕುಮಾರಪಡೆಯ ಗೌರವ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್ ನೇತೃತ್ವದಲ್ಲಿ ಆಚರಣೆ ಮಾಡಲಾಯಿತು.
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ವಡಕಹಳ್ಳಿ ಗ್ರಾಮದ ಹುಟ್ಟು ಅಂಗವಿಕಲ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿರುವ ಶಿವು ರವರ ಹುಟ್ಟು ಹಬ್ಬವನ್ನು ಕರ್ನಾಟಕ ಕುಮಾರ ಪಡೆಯ ಸದಸ್ಯರುಗಳು ಹುಟ್ಟು ಹಬ್ಬವನ್ನು ಆಚರಿಸಿದರು..
ನಂತರ ಗೌರವ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ಕುಮಾರಣ್ಣನವರ ಮೇಲೆ ಅಪಾರ ಪ್ರೀತಿ, ಗೌರವ ವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಕುಮಾರ ಸ್ವಾಮಿಯವರ ಸಾಧನೆ ಬಗ್ಗೆ ಬಿತ್ತರಿಸುತ್ತಿದ್ದ ಶಿವು ಅವರ ಹುಟ್ಟು ಅಂಗವಿಕಲ. ಕಡು ಬಡವ ಕುಟುಂಬದಲ್ಲಿ ಜನಿಸಿದ್ದು ಕುಮಾರಣ್ಣನವರ ಸಾಧನೆಯನ್ನೇ ಮಾರ್ಗದರ್ಶನ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ ಇಂತಹ ಯುವಕನ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿರುವುದು ನಮ್ಮ ಎಲ್ಲರ ಅದೃಷ್ಟ ಎಂದರು…
ಅAಗವಿಕಲ ಶಿವು ಮಾತನಾಡಿ ೨೦೨೩ಕ್ಕೆ ಕುಮಾರಣ್ಣ ನವರೇ ಬಹುಮತದೊಂದಿಗೆ ಮುಖ್ಯಂತ್ರಿಯಾಗಬೇಕು ಎಷ್ಟೂ ಅಂಗವಿಕಲರಿಗೆ ಆದರ್ಶವಾದ ಮುಖ್ಯಮಂತ್ರಿ ಅಂದ್ರೆ ಅದು ಕುಮಾರಸ್ವಾಮಿ ಮಾತ್ರ ಎಂದರು..
ಈ ಸಂದರ್ಭದಲ್ಲಿ ಕರ್ನಾಟಕ ಕುಮಾರ ಪಡೆಯ ಅದ್ಯಕ್ಷ ನಟರಾಜ್, ಗೌರವ ಸಲಯೆಗಾರ ಕಾಯಿ ಮಂಜೇಗೌಡ, ತಾಲ್ಲೂಕು ಪಂಚಾಯಿತಿಮಾಜಿ ಸದಸ್ಯ ಕೋಟೇಗೌಡ್ರು,ಮುಖಂಡರಾದ ಚಂದ್ರೇಗೌಡ, ಸದಸ್ಯರಾದ ಲೋಕೇಶ್, ಶಿವು, ಪಾಪಣ್ಣಿ, ಅನೀಲ್, ಮಂಜು, ಯೋಗೇಶ್, ಬಾರೆ ಮಂಜು, ಮತ್ತಿತ್ತರರು ಇದ್ದರು
ವರದಿ ಶಂಭು ಕಿಕ್ಕೇರಿ
More Stories
ಕೆ.ಆರ್.ಪೇಟೆಯಲ್ಲಿ ಚಂಪಾ ಷಷ್ಠಿಯ ಸಂಭ್ರಮ, ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ
ನಾಳೆ ನಡೆಯಬೇಕಿದ್ದ ಜನಸ್ಪಂದನಾ ಸಭೆ ಅನಿರ್ಧಿಷ್ಠಾವಧಿ ಮುಂದೂಡಿಕೆ
ರಾಜ್ಯದಲ್ಲೇ ಪ್ರಥಮ ಸೌರ ಶಕ್ತಿ ಆಧಾರಿತ ಮಕ್ಕಳ ಹಾಲುಣಿಸುವ ಕೊಠಡಿ ಉದ್ಘಾಟನೆ