April 23, 2024

Bhavana Tv

Its Your Channel

ರೈತಸಂಘದ ವತಿಯಿಂದ ರೈತ ಮಹದೇವ ಅಲೆಮನೆರವರಿಗೆ ಶ್ರದ್ದಾಂಜಲಿ ಸಭೆ

ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ರೈತಸಂಘದ ವತಿಯಿಂದ ರೈತ ಮಹದೇವ ಅಲೆಮನೆ ಅಕಾಲಿಕ ಮರಣ ಹೊಂದಿದ್ದ ಹಿನ್ನಲೆಯಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.

ಸಭೆಯನ್ನು ತಹಸೀಲ್ದಾರ್ ವಿಜಯಣ್ಣ ದಿ ಮಹದೇವ ಅಲೆಮನೆ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. ಬಳಿಕ ತಹಸೀಲ್ದಾರ್ ವಿಜಯಣ್ಣ ಮಾತನಾಡಿ, ರೈತಮುಖಂಡ ನನ್ನು ಕಳೆದುಕೊಂಡಿದ್ದು ನೋವಿನ ಸಂಗತಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು
ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಶಿವರುದ್ರ ಮಾತನಾಡಿ ರೈತ ಸಂಘದ ಕಟ್ಟಾಳು ಆಗಿದ್ದ ಮಹದೇವ ಅವರು ಸಂಘದ ಯಾವುದೇ ಕಾರ್ಯ ಚಟುವಟಿಕೆಗಳ ಸದಾ ಮುಂದಿದ್ದರು ಇವರ ಅಕಾಲಿಕ ಅಗಲಿಕೆ ರೈತ ಸಂಘದ ಚಳುವಳಿ ಹೋರಾಟ ಪೆಟ್ಟು ಬಿದ್ದಂತಾಗಿದ್ದು ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಹಾರೈಸಿದರು.
ಜಿಲ್ಲಾಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷ. ಎಳೇಗೌಡ, ತಾಲ್ಲೂಕು ಉಪಾಧ್ಯಕ್ಷರಾದ ದೇವಿಪುರ ಬಸವರಾಜು, ಗುಳಘಟ್ಟದ ಬಸವರಾಜು, ತಾಲ್ಲೂಕು ಕಾರ್ಯದರ್ಶಿ ಬಸವರಾಜೇ ಅರಸು , ಜಿಲ್ಲಾ ಕಾರ್ಯದರ್ಶಿ ರಾಮಲಿಂಗೇಗೌಡ, ತಾಲ್ಲೂಕು ಮುಖಂಡ ದೇವಿಪುರ ಮಹೇಶ್, ಚಿಕ್ಕಮೂಲಗೂಡು ನಾಗರಾಜು ಸೇರಿದಂತೆ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

error: