April 23, 2024

Bhavana Tv

Its Your Channel

ದೇವಾಲಯಗಳ ಧ್ವಂಸ ವಿಚಾರವಾಗಿ ಸರ್ಕಾರದ ವಿರುದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶ

ನಾಗಮಂಗಲ: ದೇವಾಲಯಗಳನ್ನು ಏಕಾಏಕಿ ಬುಲ್ಡೋಜರ್ ಮಾಡೊದು ಸರ್ಕಾರಕ್ಕೆ ಶೋಭೆಯಲ್ಲ. ಬಿಜೆಪಿಯವರ ಹಿಂದುತ್ವದ ಬಣ್ಣ ಬಯಲಾಗಿದೆ. ದೇವಾಲಯಗಳ ಧ್ವಂಸ ವಿಚಾರವಾಗಿ ಸರ್ಕಾರದ ವಿರುದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರ ಹಿಂದುತ್ವ ಹಿಂದೂಗಳ ರಕ್ಷಣೆಗೆ ಎಂದೂ ಬಳಕೆಯಾಗಿಲ್ಲ. ಕೇವಲ ಓಟ್ ಗಾಗಿ ಹಿಂದುತ್ವ ಉಪಯೋಗಿಸಿಕೊಳ್ಳುತ್ತಿದ್ದಾರೆ.ಅವರ ಹಿಂದುತ್ವನೇ ಬೇರೆ, ವಾಸ್ತವ ಹಿಂದುತ್ವನೇ ಬೇರೆ.ಸುಪ್ರಿಂ ಕೋರ್ಟ್ ಆದೇಶ ಪಾಲನೆ ಮಾಡುವುದು ಸರಿ. ಆದರೆ ಅಲ್ಲಿನ ಸ್ಥಳೀಯ ಸ್ಥಿತಿಗಳನ್ನು ಅವಲೋಕಿಸಿ ನಿರ್ಧರಿಸಬೇಕಿದೆ.

ಮಂಡ್ಯ ಜಿಲ್ಲೆಯ ಹಿತವನ್ನು ಜೆಡಿಎಸ್ ಎಂದೂ ಬಯಸಿಲ್ಲ. ಅವರ ಕೇಂದ್ರ ಹಾಸನ ಜಿಲ್ಲೆ, ಹಾಗಾಗಿ ಹಾಸನದ ಮೇಲಿರುವ ಮಮತೆ ಮಂಡ್ಯ ಮೇಲೆ ಯಾವತ್ತು ಜೆಡಿಎಸ್‌ಗೆ ಇಲ್ಲವಾಗಿದೆ. ಜೆಡಿಎಸ್ ಮಂಡ್ಯದಲ್ಲಿ ಕಳೆದ ಬಾರಿ ಕಾರಣಾಂತರಗಳಿAದ ೭ ಸ್ಥಾನ ಗೆದ್ದಿದೆ ಅಷ್ಟೇ ಎಂದರು.
ಜಿಲ್ಲೆಯಲ್ಲಿನ ೧೦ ಜನ ಜೆಡಿಎಸ್ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಧ್ವನಿಯಾಗದೆ ಮೌನವಾಗಿದ್ದಾರೆ ಎಂದರೆ ಅದಕ್ಕೆ ಅವರ ಸಹಕಾರವಿದೆ ಎಂದರ್ಥ ಎಂದು ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿದರು.

ವರದಿ: ಚಂದ್ರಮೌಳಿ ನಾಗಮಂಗಲ

error: