ನಾಗಮOಗಲ: ಸರ್ಕಾರಿ ಆಸ್ತಿ ಕಬಳಿಕೆ ಮಾಡುವವರೇ ಹೆಚ್ಚಾಗುತ್ತಿರುವ ಈ ವೇಳೆ ಸಾರ್ವಜನಿಕ ಸೇವೇಗೆ ಉಪಯೋಗವಾಗಲಿ ಎಂದು ತಮ್ಮ ಸ್ವಂತ ಆಸ್ತಿಯನ್ನೇ ಸರ್ಕಾರಕ್ಕೆ ದಾನಬರೆದ ಕುಟುಂಬದ ಬಗ್ಗೆ ನಾಗಮಂಗಲ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನಾಗಮಂಗಲ ತಾಲ್ಲೂಕಿನ ನಾಗನಹಳ್ಳಿ ಗ್ರಾಮದ ಶಿಲ್ಪಾ ನಂದೀಶ್ ಎಂಬುವರೇ ನಾಡಕಛೇರಿಗಾಗಿ ಬೆಲೆ ಬಾಳುವ ಜಮೀನನ್ನು ನಾಗಮಂಗಲ ತಹಶೀಲ್ದಾರ್. ಹೆಸರಿಗೆ ದಾನ ಬರೆದ ಕುಟುಂಬ ಕುಟುಂಬವಾಗಿದೆ.
ತಾಲ್ಲೂಕಿನ ದೇವಲಾಪುರ ಹೋಬಳಿ ಕೇಂದ್ರ ಮುಖ್ಯ ರಸ್ತೆಯಲ್ಲಿ ೩೦*೪೦ ಅಳತೆಯ ಜಮೀನನ್ನು ಕಾನೂನು ಬದ್ದವಾಗಿ ನಾಗಮಂಗಲ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ. ನೊಂದಣಿ ಮಾಡಿ ತಹಶೀಲ್ದಾರ್ ಅವರಿಗೆ ದಾನಪತ್ರ ಹಸ್ತಾಂತರ ಮಾಡಿದರು.
ಕಂದಾಯ ಇಲಾಖೆಗೆ ದಾನ ಪತ್ರ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕುಂಞ ಅಹಮ್ಮದ್ ಶಿಲ್ಪಾ ನಂದೀಶ್ ಕುಟುಂಬ ಸಾರ್ವಜನಿಕ ಸೇವೆಗಾಗಿ ಆಸ್ತಿ ದಾನ ಮಾಡಿದಕ್ಕೆ ಇಲಾಖೆ ಪರವಾಗಿ ಅಭಿನಂದಿಸಿದರು ಹಾಗೂ ಮತ್ತು ಶೀಘ್ರದಲ್ಲೇ ನಾಡಕಛೇರಿ ಕಟ್ಟಡ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ನಾಡ ಕಛೇರಿಗಾಗಿ ಆಸ್ತಿ ದಾನ ಪತ್ರ ನೀಡಿದ ಸಾರ್ಥಕತೆ ಮೆರೆದ ಶಿಲ್ಪಾ ರವರ ಪತಿ ನಂದೀಶ್ ಮಾತನಾಡಿ ಜನರ ಆಗತ್ಯತೆ ಮನಗಂಡು ಆಸ್ತಿ ದಾನ ಮಾಡಿದ್ದೇವೆ. ನಮ್ಮ ಕುಟುಂಬದ ಹೆಸರು ನಾಮಫಲಕದಲ್ಲಿ ಇರುವಂತೆ ತಹಶೀಲ್ದಾರ್ ರವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ