ನಾಗಮಂಗಲ.ನನ್ನ ಹೆಸರು ಕೇವಲ ನಗಣ್ಯ. ಇಲ್ಲಿ ಸ್ಪರ್ಧಿಗಳು ನೀವು ಹಾಗೂ ನಮ್ಮ ನಾಯಕರು ಹಾಗೂ ಮಾರ್ಗದರ್ಶಕರಾದ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರೇ ಎಂದು ತಿಳಿದು ನನ್ನನ್ನು ಬೆಂಬಲಿಸಿ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರು ಮತಯಾಚಿಸಿದರು.
ಸೋಮವಾರ ಬೆಳ್ಳೂರು ಹೋಬಳಿಯ ಕಾಳಿಂಗನ ಹಳ್ಳಿ, ನಲ್ಲಿಗೆರೆ, ಚುಂಚನಹಳ್ಳಿ, ಹಾರಣಿ, ದೇವಳ್ಳಿ, ಬೇಳ್ಳೂರು ಟೌನ್ ಪಂಚಾಯಿತಿಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮತಯಾಚಿಸುವ ಮೂಲಕ ಮಾತನಾಡಿದರು.
ನನಗೆ ಯಾವ ಕೆಟ್ಟಚಟಗಳು ಇಲ್ಲ. ಬೆಳಿಗ್ಗೆ ೦೪ ಗಂಟೆಗೆ ನನ್ನ ಕೆಲಸ ಶುರುವಾದರೆ ರಾತ್ರಿಯವರೆಗೂ ಇರಲಿದೆ. ಸದಾ ನಿಮ್ಮ ಸೇವೆ ೨೪ ಗಂಟೆಯೂ ಲಭ್ಯವಿರುವೆ. ಗ್ರಾಮಪಂಚಾಯಿತಿಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ನಿಮ್ಮ ಪಂಚಾಯಿತಿಯ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಮುಖಂಡರಾದ ಸಚ್ಚಿನ್ ಚಲುವರಾಯಸ್ವಾಮಿ ಅವರು ಮಾತನಾಡಿ, ಈ ಜಿಲ್ಲೆಯ ಕಷ್ಟಗಳನ್ನು ಕೇಳಲು, ಆಲಿಸಲು ಒಬ್ಬ ಸೂಕ್ತ ಅಭ್ಯರ್ಥಿಯ ಅವಶ್ಯಕತೆ ಇದೆ. ಈ ಬಾರಿ ಅಂತಹ ಸೂಕ್ತ ಅಭ್ಯರ್ಥಿಯನ್ನೆ ಕಾಂಗ್ರೆಸ್ ಪಕ್ಷ ನಿಲ್ಲಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರಿಗೆ ಹೆಚ್ಚು ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು ಎಂದು ದಿನೇಶ್ ಗೂಳಿಗೌಡ ಅವರ ಪರವಾಗಿ ಮತಯಾಚಿಸಿದರು.
ಯುವ ಕಾಂಗ್ರಸ್ ಮುಖಂಡ ಸುನೀಲ್ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರು ಗೆಲ್ಲಿಸಬೇಕು. ಕಾರಣ ಇವರು ನಮ್ಮ ಧ್ವನಿಯಾಗಿ ವಿಧಾನ ಸಭೆಯಲ್ಲಿ ಕಾರ್ಯನಿರ್ವಹಿ ಸುತ್ತಾರೆ. ಹಲವಾರು ಮಂತ್ರಿಗಳ ಜೊತೆ ಕಾರ್ಯನಿರ್ವಹಿಸುವ ಮೂಲಕ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ ಹಾಗೂ ನಮಗೂ ಇವರಿಂದ ಸಹಕಾರ ಸಿಗಲಿದೆ ಎಂದರು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ, ಅಶ್ವಿನಿ ಗೌಳಿಗೌಡ, ಯುವ ಕಾಂಗ್ರೆಸ್ ಮುಖಂಡರಾದ ಸಚ್ಚಿನ್ ಚಲುವರಾಯಸ್ವಾಮಿ, ಸುನೀಲ್ ಗೌಡ ಸೇರಿದಂತೆ ಇತರರು ಹಾಜರಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ