April 25, 2024

Bhavana Tv

Its Your Channel

ನಾಗಮಂಗಲ ಕಾರ್ಯನಿರತ ಪತ್ರಕರ್ತರ ಸಂಘದಿoದ ವರ್ಗಾವಣೆಯಾದ ದಂಡಾಧಿಕಾರಿಗಳಿಗೆ ಬೀಳ್ಕೊಡುಗೆ

ನಾಗಮಂಗಲ: ತಾಲ್ಲೂಕಿನ ತಹಶೀಲ್ದಾರ್ ಆಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಕುಂ.ಇ.ಅಹಮದ್ ಅವರನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೋಡುಗೆ ನೀಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ಬಿಳ್ಕೋಡುಗೆ ನಡೆಯಿತು.

ಈ ವೇಳೆ ಹಿರಿಯ ಪತ್ರಕರ್ತ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಸಿ.ಎನ್.ಮಂಜುನಾಥ್ ಮಾತನಾಡಿ ಕೋವಿಡ್ ಆರಂಭದ ವೇಳೆಯಲ್ಲಿಯೇ ತಾಲ್ಲೂಕಿಗೆ ವರ್ಗವಾಗಿ ಬಂದು ಅಂತಹ ಒತ್ತಡದ ಸನ್ನಿವೇಶದಲ್ಲಿಯೂ ಜನಪರ ವಾಗಿ ಕಾರ್ಯನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದಾರೆ. ಅವರು ಈಗಷ್ಟೇ ಸರ್ಕಾರದ ಆದೇಶದಂತೆ ವರ್ಗಾವಣೆಗೊಂಡಿದ್ದಾರೆ. ಅವರ ಮುಂದಿನ ವೃತ್ತಿ ಜೀವನ ಯಶಸ್ಸಾಗಲಿ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಕುಂ.ಇ.ಅಹಮದ್ ತಾಲ್ಲೂಕಿನಲ್ಲಿ ಕಾರ್ಯನಿರ್ವಹಣೆ ಮಾಡುವ ವೇಳೆ ಹಲವು ಸಂಕಷ್ಟಗಳ ನಡುವೆಯೂ ಇಲ್ಲಿನ ಜನ ತಾಲ್ಲೂಕು ಆಡಳಿತಕ್ಕೆ ಸ್ಪಂದಿಸಿದ್ದ ರೀತಿ ನೋಡಿದಾಗ ಮನಸ್ಸು ತುಂಬಿ ಬರುತ್ತದೆ. ಇಂತಹ ತಾಲ್ಲೂಕಿನಲ್ಲಿ ಕೆಲಸ ಮಾಡಲು ಸಂತಸವಾಗುತ್ತದೆ ಎಂದರು.

ಈ ವೇಳೆ ಪತ್ರಕರ್ತರಾದ ಬಿ.ಸಿ.ಮೋಹನ್ ಕುಮಾರ್, ಪಿ.ಜೆ.ಜಯರಾಂ, ಎ.ಎಚ್.ಬಾಲಕೃಷ್ಣ, ವಿಶ್ವಾಸ್, ವಸಂತ, ಮಹೇಶ್, ಬಿ.ಎಚ್.ರವಿ, ನಾರಾಯಣ್, ಕೇಶವ, ಕೃಷ್ಣಾಚಾರಿ ವಸಂತ್ ಇದ್ದರು.

ವರದಿ:ದೇವಲಾಪುರ ಜಗದೀಶ ನಾಗಮಂಗಲ

error: