April 24, 2024

Bhavana Tv

Its Your Channel

ಮದುವೆ ಆದ ನಾಲ್ಕೇ ದಿನಕ್ಕೆ ನವ ದಂಪತಿಗಳಿಬ್ಬರು ಸ್ಮಶಾನಕ್ಕೆ; ಕುಟುಂಬದವರ ಆಕ್ರಂದನ

ಹೈದರಾಬಾದ್: ಗೋದಾವರಿ ಜಿಲ್ಲೆಯ ಕೈಕಾರಂ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮದುವೆಯಾದ ನಾಲ್ಕೇ ದಿನಕ್ಕೆ ನವದಂಪತಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ವರ ವೆಂಕಟೇಶ್ (30) ಮತ್ತು ವಧು ಮಾನಸ ನವ್ಯಾ ಮೃತ ದುರ್ದೈವಿಗಳು.

ಸಾಫ್ಟ್ ವೇರ್ ಎಂಜಿನಿಯರ್ ವೆಂಕಟೇಶ್ ಮತ್ತು ಮಾನಸ ನವ್ಯಾ ಜೂನ್ 14 ರಂದು ಅದ್ಧೂರಿಯಾಗಿ ಮದುವೆಯಾಗಿ, ತೆನಾಲಿ ಬಳಿಯ ಗೋವಾಡ ಗ್ರಾಮದಲ್ಲಿರುವ ನವ್ಯಾ ಎಂಬವರ ಮನೆಯಲ್ಲಿ ಮೂರು ದಿನ ನವ ಜೋಡಿ ಇದ್ದರು. ಗುರುವಾರ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ವರನ ಮನೆಗೆ ದಂಪತಿಗಳು ಕಾರಿನಲ್ಲಿ ಹೊರಟ್ಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮೊದಲಿಗೆ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು, ನಂತರ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡಿದ್ದವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ನವ ಜೋಡಿ ಸೇರಿದಂತೆ ಕಾರಿನ ಚಾಲಕ ಕೂಡ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

error: