April 20, 2024

Bhavana Tv

Its Your Channel

ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗದ ಪ್ರವಾಸಿಗರು ನೀರು ಪಾಲು

ಭಟ್ಕಳ :ತಾಲ್ಲೂಕಿನ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗದ ಪ್ರವಾಸಿಗರು ಭಾನುವಾರ ಈಜಲು ಸಮುದ್ರಕ್ಕೆ ಇಳಿದ ಸಂದರ್ಭದಲ್ಲಿ ಇಬ್ಬರೂ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಶಿವಮೊಗ್ಗ ಶಿಕಾರಿಪುರ ಮಾಸೂರು ನಿವಾಸಿಗಳಾದ ಮಂಜುನಾಥ ಹಾಗೂ ಮಣಿ ಕೊಚ್ಚಿಕೊಂಡ ಹೋದ ಪ್ರವಾಸಿಗರು. ಮಂಜುನಾಥ ಮೃತದೇಹ ದಡಕ್ಕೆ ತೇಲಿಕೊಂಡು ಬಂದಿದೆ, ಆದರೆ ಮಣಿಕಂಠ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.
ಭಟ್ಕಳದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು,ಸಮುದ್ರ ಸೇಳೆತ ಜೋರಾಗಿತ್ತು. ನೀರಿನ ಸೆಳೆತದ ಕಾರಣ ಪ್ರವಾಸಿಗರಿಗೆ ದೇವಸ್ಥಾನದ ಎಡಭಾಗದಲ್ಲಿ ಸಮುದ್ರಕ್ಕೆ ತೆರಳಲು ಅವಕಾಶ ನೀಡಿರಲಿಲ್ಲ ದೇವಸ್ಥಾನದ ಬಲಭಾಗದಲ್ಲಿ ಕದ್ದುಮುಚ್ಚಿ ಈಜಲು ಹೋದ ನಾಲ್ವರಲ್ಲಿ ಚಂದನ ಹಾಗೂ ಪ್ರವೀಣ ಬಂಡೆ ಹಿಡಿದುಕೊಂಡು ಬಚಾವ ಆಗಿದ್ದಾರೆ. ಆದರೆ ಮಣಿಕಂಠ ಮತ್ತು ಮಂಜುನಾಥ ಅವರು ನೀರಿನ ಸೆಳೆತಕ್ಕೆ ಈಜಲು ಸಾಧ್ಯವಾಗದೇ ನೀರುಪಾಲಾಗಿದ್ದಾರೆ. ಮುರ್ಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: