ಶಿವಮೊಗ್ಗ: ಹಸೂಡಿ ಗ್ರಾಮ ದೇವರಾದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಹಿಂಭಾಗ ಜಾಗದಲ್ಲಿರುವ ದೇವಸ್ಥಾನಕ್ಕೆ ಸಂಬAಧಪಟ್ಟ ಜಾಗದಲ್ಲಿ ಈ ಕೆಲ ದಿನಗಳ ಹಿಂದೆ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡಿರುವುದು ಆದರೆ ಬಸ್ ಸ್ಟ್ಯಾಂಡ್ ನಿರ್ಮಾಣವಾದ ಜಾಗವು ದೇವಸ್ಥಾನಕ್ಕೆ ಸಂಬoಧಪಟ್ಟಿರುತ್ತದೆ. ಬಸ್ ಸ್ಟ್ಯಾಂಡ್ ನಿರ್ಮಾಣಗೊoಡ ದಿನದಿಂದಲೂ ಸಾರ್ವಜನಿಕರು ಸೇರಿದಂತೆ ಕೆಲ ಕಿಡಿಗೇಡಿಗಳು ಮಲ, ಮೂತ್ರ ವಿಸರ್ಜನೆ ಹಾಗೂ ಗುಟ್ಕಾ ತಂಬಾಕು ಎಲೆ ಅಡಿಕೆ ಉಗಿದು ದೇವಸ್ಥಾನದ ಆವರಣವು ಸ್ವಚ್ಛತೆ ಇಲ್ಲದ ಕಾರಣದಿಂದ ಅಪವಿತ್ರ ಗಳಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ ಆದ್ದರಿಂದ ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿಯು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು ಪವಿತ್ರವಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನದ ಜಾಗದಲ್ಲಿರುವ ಬಸ್ ಸ್ಟ್ಯಾಂಡ್ ಅನ್ನು ಸ್ಥಳಾಂತರಿಸಬೇಕೆoದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಒಂದು ವೇಳೆ ಈ ಕೂಡಲೇ ಕ್ರಮ ಕೈಗೊಂಡು ಬಸ್ ಸ್ಟ್ಯಾಂಡ್ ತೆರವುಗೊಳಿಸದಿದ್ದಲ್ಲಿ ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿಯು ಉಗ್ರ ಹೋರಾಟ ನಡೆಸಲಾಗುವುದು
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಟಿ.ಕಿರಣ್ ಕುಮಾರ ಪವಾರ್, ಜಿಲ್ಲಾಧ್ಯಕ್ಷರು ವಿ ಲೋಕೇಶ ಕುಮಾರ್, ರಾಜ್ಯ ಕಾರ್ಯದರ್ಶಿ ಎಮ.ಬಿ ಅಬ್ದುಲ್ ಲತೀಫ್, ತಾಲೂಕು ಅಧ್ಯಕ್ಷರು ಹೆಚ್. ಎನ್ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಕೆ.ಜಿ.ಕೇಶವ ಮೂರ್ತಿ, ಜಿಲ್ಲಾ ಉಪಾಧ್ಯಕ್ಷರು ಮಹಿಳಾ ಘಟಕ ಮಂಗಳಮ್ಮ, ಜಿಲ್ಲಾಧ್ಯಕ್ಷರು ಆಟೋಘಟಕ ಸಿದ್ಧೇಶ, ತಾಲ್ಲೂಕು ಕಾರ್ಯದರ್ಶಿ ಸಿ ವೆಂಕಟೇಶ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ, ನಗರ ಅಧ್ಯಕ್ಷರು ಶರಾವತಿ, ತಾಲೂಕು ಅಧ್ಯಕ್ಷರು ಮಹಿಳಾ ಘಟಕ ಶಕೀಲಾ ಬಾನು, ಹಸೂಡಿ ಅಧ್ಯಕ್ಷರು ಹೆಚ್ ವಿ ಶರವಣ ಉಪಸ್ಥಿತರಿದ್ದರು.
More Stories
ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿoದ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ