ಶಿವಮೊಗ್ಗ: ಹಳ್ಳಿಗಳಲ್ಲಿ ಘನ ತ್ಯಾಜ್ಯ ಘಟಕಗಳನ್ನು ನಿರ್ಮಿಸುವುದು ಕೇಂದ್ರ ಸರಕಾರದ ಕನಸಿನ ಕೂಸು, ಅದಿಂದು ಪ್ರತಿ ಹಳ್ಳಿಗಳಲ್ಲೂ ನನಸಾಗುತ್ತಲಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಕೆ.ಬಿ ಪವಿತ್ರ ರಾಮಯ್ಯ ರವರು ತಿಳಿಸಿದರು.
ಅವರು ಶನಿವಾರ ಸನ್ಯಾಸಿ ಕೋಡಮಗ್ಗಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಗುದ್ದಲಿ ಪೂಜೆ ಮತ್ತು ಘನ ತ್ಯಾಜ್ಯ ಮತ್ತು ಮಿನಿ ಅಂಗನವಾಡಿ ಕೇಂದ್ರ, ಕನಸಿನಕಟ್ಟೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ ನಿರ್ಮಾಣಗೊಂಡಿರುವುದು ಹಳ್ಳಿಗಳಿಂದ ಎಂಬ ಮಾತಿದೆ, ಅದೇ ರೀತಿ ಒಂದು ದೇಶ ಸಮೃದ್ಧವಾಗಿ ಬೇಳೆಯಬೇಕೆಂದರೆ ಹಳ್ಳಿಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ಮುಖ್ಯವಾಗುತ್ತದೆ.
ಆದ್ದರಿಂದ ಈ ರೀತಿಯ ಸರಕಾರದ ಯೋಜನೆಗಳನ್ನು ರೈತರು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸ್ಥಳೀಯವಾಗಿ ನಮ್ಮ ಜೊತೆ ಉತ್ತಮ ಹಾಗೂ ಜನಸ್ನೇಹಿ ನಾಯಕರುಗಳು ಇದ್ದಾರೆ, ಮುಂದಿನ ದಿನಗಳಲ್ಲಿ ಖಂಡಿತಾ ನಮ್ಮ ಪಕ್ಷದಿಂದ ಜಿಲ್ಲೆಗೆ ಉತ್ತಮವಾದ ಯೋಜನೆಗಳನ್ನು ತರಲು ಶ್ರಮಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ್ ನಾಯ್ಕ್ , ವಿಧಾನ ಪರಿಷತ್ ಶಾಸಕರಾದ
ಡಿ.ಎಸ್ ಅರುಣ್ , ರುದ್ರೆಗೌಡ .ಎಸ್ , ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಷಡಾಕ್ಷರಪ್ಪ ಗೌಡ ಎನ್.ಪಿ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗೇಶಪ್ಪ ಬಿ.ಎಂ , ಉಪಾಧ್ಯಕ್ಷ ರಾದ ನೀಲಮ್ಮ ರವಿ ಮತ್ತು ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
More Stories
ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿoದ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ