April 25, 2024

Bhavana Tv

Its Your Channel

ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಪವಿತ್ರರಾಮಯ್ಯ ಕೆ.ಬಿ ಕಾಮಗಾರಿ ಗುತ್ತಿಗೆದಾರರಿಗೆ ಸೂಚನೆ

ಶಿವಮೊಗ್ಗ: ಉತ್ತಮ ಗುಣ ಮಟ್ಟದ ಕಾಮಗಾರಿಗೆ ಒತ್ತು ನೀಡಿ, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಕಾಮಗಾರಿ ಗುತ್ತಿಗೆದಾರರಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಪವಿತ್ರರಾಮಯ್ಯ ಕೆ.ಬಿ ರವರು ಸೂಚನೆ ನೀಡಿದರು.

ಭದ್ರಾವತಿ ತಾಲ್ಲೂಕು, ಬಿಳಿಕಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಡದಂಡೆ ನಾಲೆಯ ಸೇತುವೆ ಕಾಮಗಾರಿಯನ್ನು ರೈತರ ಅಪೇಕ್ಷೆಯಂತೆ ಕಾಡಾ ಅಭಿಯಂತರರೊAದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮಳೆಗಾಲ ಆರಂಭಗೊAಡಿದೆ, ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದಲ್ಲಿ ಸಮಸ್ಯೆ ಎದುರಿಸುವುದು ಈ ಭಾಗದ ರೈತರು. ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಜಮೀನಿಗೆ ತೆರಳಲು ಅತೀ ಶೀಘ್ರವಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬAಧ ಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪಾಪಿಭಾಯ್ , ಮತ್ತು ಸದಸ್ಯರಾದ ಹೇಮಂತ, ಪಿಡಿಒ ವೆಂಕಟೇಶ್ , ಭದ್ರಾವತಿ ತಾಲ್ಲೂಕು ರೈತ ಮೋರ್ಚಾ ಕಾರ್ಯದರ್ಶಿ ಸಂತೋಷ್ , ಗುತ್ತಿಗೆ ದಾರರು, ಹಾಗೂ ರೈತ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.

error: