March 22, 2024

Bhavana Tv

Its Your Channel

ಬಿ.ಜೆ.ರಾಜಶೇಖರ್ ಕೈಯಿಂದ ಮೂಡಿದ ಗಣಪತಿ,ಶಾರದೆ,ನವ ದುರ್ಗೆಯ ಕಲಾಕೃತಿಗಳು

ಶಿವಮೊಗ್ಗ:- ಬಿ.ಜೆ.ರಾಜಶೇಖರ್ ಕಲಾವಿದರು ಶಿವಮೊಗ್ಗ,ಇವರು ಸುಮಾರು 51ವರ್ಷಗಳಿಂದ ಗಣಪತಿ,ಶಾರದೆ,ನವ ದುರ್ಗೆಯ, ಸಿಮೆಂಟ್ ವರ್ಕ್, ಕ್ಲೆ ವರ್ಕ್, ಕ್ಯಾನ್ವಾಸ್ ವರ್ಕ್ ಮಾಡುತ್ತಾರೆ. ಶಿವಮೊಗ್ಗ ದ ರಾಮಣ್ಣ ಶೆಟ್ಟಿಯ ಪಾರ್ಕ್ ಗೆ 12ಅಡಿಯ ಗಣೇಶನ ವಿಗ್ರಹವನ್ನು ಮಾಡಿರುತ್ತಾರೆ, ಹಾಗೂ 1991 ರಿಂದ 2013 ರ ತನಕ ಮಂಗಳೂರಿನ ದಸರಾದ ಶಾರದೆ ನವ ದುರ್ಗೆ ಯ ವಿಗ್ರಹವನ್ನು ಮಾಡಿರುತ್ತಾರೆ.ಇವರು ಮೂಲತಃ ಬಂಟ್ವಾಳ ದವರು ತದನಂತರ ಶಿವಮೊಗ್ಗದಲ್ಲಿ ವಾಸವಾಗಿ ರುತ್ತಾರೆ,ಶಿವಮೊಗ್ಗದಲ್ಲಿ ಆರ್ಟ್ ಒಫ ಸ್ಕೂಲ್ ನಡೆಸುತ್ತಾರೆ ಇವರು ಸೋನಿಯಾ ಗಾಂಧಿಯವರಿAದ ಸನ್ಮಾನಿಸಲ್ಪಟ್ಟಿರುತ್ತಾರೆ.
ಇವರ ಶಿಷ್ಯರಾದ ಹನುಮಂತ ಮಾರುತಿ, ರಾಧೇ ಶ್ಯಾಮ ಇವರ ಜೊತೆ ಕೈ ಜೋಡಿಸಿ ಸುಮಾರು 15 ಸಾರ್ವಜನಿಕ ಗಣೇಶನ ವಿಗ್ರಹವನ್ನು ಮಾಡಿರುತ್ತಾರೆ.

ವರದಿ: ಅರುಣ ಭಟ್ ಕಾರ್ಕಳ

error: