ಶಿವಮೊಗ್ಗಾ:- ಭದ್ರಾವತಿ ತಾಲ್ಲೂಕಿನ ದಾಸರಕಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಹಳ್ಳಿಯ ರೈತರ ಜಮೀನಿಗೆ ನಿರ್ಮಿಸಿದ್ದ ನೀರು ಹರಿಸುವ ಕಾಲುವೆಯನ್ನು (ಈIಅ) ಪಕ್ಕದ ಜಮೀನಿನ ರೈತರು ಕುರುಹೂ ಸಹ ಸಿಗದೆ ಮುಚ್ಚಿದ್ದು, ಇದರಿಂದ ಗೊಂದಿ ಕಾಲುವೆಯ ನೀರನ್ನು ಜಮೀನಿಗೆ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರೊಬ್ಬರು ಕಳೆದೆರಡು ದಿನಗಳ ಹಿಂದೆ ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿ ಪ್ರಾಧಿಕಾರಕಛೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದರು.ಈ ದೂರಿನನ್ವಯ ಅಧ್ಯಕ್ಷರಾದ ಪವಿತ್ರ_ರಾಮಯ್ಯ ರೈತರ ಜಮೀನಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ಸರಕಾರದಿಂದ ಯಾವುದೇ ಯೋಜನೆಯನ್ನು ಜಾರಿಗೆ ತಂದರು ಅದು ರೈತರಿಗೆ ಉಪಯೋಗವಾಗಬೇಕು. ಅದನ್ನು ಹೊರತು ಪಡಿಸಿ ರೈತರೇ ಇನ್ನೊಬ್ಬ ರೈತನಿಗೆ ಸಮಸ್ಯೆ ಉಂಟು ಮಾಡಿದರೆ ಅದು ತಪ್ಪು. ಹಾಗೆಯೇ ಅಕ್ಕ ಪಕ್ಕದ ಜಮೀನಿನ ರೈತರ ಮಧ್ಯೆಯೇ ವೈರತ್ವ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲೂ ಇದು ಸಮಸ್ಯೆಯಾಗಿ ಪರಿಭ್ರಮಿಸುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರಾದ ಪವಿತ್ರ ರಾಮಯ್ಯ ತಿಳಿಸಿದ್ದಾರೆ,.
More Stories
ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿoದ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ