ಶಿವಮೊಗ್ಗ: ಜಿಲ್ಲೆಯ ಸಿಗಂದೂರು ದೇವಾಲಯದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ಬೆಳೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ನಡೆದಿದೆ.
ಸಿಗಂದೂರು ಧರ್ಮದರ್ಶಿ ರಾಮಪ್ಪ ಬೆಂಬಲಿಗರ ಮೇಲೆ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ.
ದೇವಾಲಯಕ್ಕೆ ಪೂಜೆ ಮಾಡಿಸಲು ಹೋದ ಮಂಜಯ್ಯ ಜೈನ್ ಎಂಬುವರ ಮೇಲೆ ಶೇಷಗಿರಿ ಭಟ್ಟರ ಸಹೋದರರು ಹಲ್ಲೆ ನಡೆಸಿದ್ದು, ಈ ವೇಳೆ ದೇವಾಲಯದ ಆಡಳಿತ ಕಚೇರಿಯ ಗ್ಲಾಸ್ ಗಳು, ಪೀಠೋಪಕರಣಗಳನ್ನು ಕೂಡ ಧ್ವಂಸ ಮಾಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಅದಾಗ್ಯೂ ಎರಡು ಬಣಗಳ ಮಾತಿನ ಚಕಮಕಿ ಇನ್ನೂ ಮುಂದುವರಿದಿದೆ. ಸದ್ಯ ದೇವಾಲಯದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ
ಇದು ಹೀಗೇ ಆಗುತ್ತೆ ಅಂತ ಈ ಹಿಂದೆಯೇ ನಾನು ಊಹಿಸಿದ್ದೆ . ಈಗ ಹಾಗೆಯೇ ಆಗುತ್ತಿದೆ. ರಾಮಪ್ಪನವರು ಮೊದಲು ಅಲ್ಲಿಂದ ಜನಿವಾರ ಸಂತತಿಯ ಅರ್ಚಕರನ್ನು ರಟ್ಟೆ ಹಿಡಿದು ಎಳೆದು ಹೊರಹಾಕಲಿ. ಹಿಂದುಳಿದ ವರ್ಗದವರೇ ಅಲ್ಲಿ ಅರ್ಚಕರಾಗಲಿ. ಹಿಂದುಳಿದ ವರ್ಗದವರ ಆಡಳಿತವಿರುವ ಎಲ್ಲಾ ದೇವಾಲಯಗಳಿಂದ ಜನಿವಾರ ಸಂತತಿಯ ಅರ್ಚಕರನ್ನು ಒದ್ದೋಡಿಸಬೇಕು. ಇಲ್ಲ ಅಂದ್ರೆ ಮುಂದೆ ದೇವಾಲಯವೆ ಕೈ ತಪ್ಪಲಿದೆ . ಎಚ್ಚರ .