April 18, 2024

Bhavana Tv

Its Your Channel

ಸೆಪ್ಟೆಂಬರ್ ೫ ಶಿಕ್ಷಕರ ದಿನಾಚರಣೆಯ ನಿಮಿತ್ತ ಕಿರು ಲೇಖನ ಸಮಾಜದ ಸರ್ವತೋಮುಖ ಪ್ರಗತಿಯ ಸಬಲೀಕರಣಕ್ಕೆ ಶಿಕ್ಷಕರೇ ಶಿಲ್ಪಿಗಳು

ಒಂದು ಶಾಲಾ ಕೊಠಡಿಯಲ್ಲೆ ಸಮಾಜದ ಭವಿಷ್ಯ ಅಡಗಿದೆ ಮಾನವೀಯ ಮೌಲ್ಯದ ನೆಲೆ ಕಾಣಿಸಿ ಭವಿಷ್ಯತ್ತಿನ ಕಾಲಕ್ಕೆ ಜ್ಞಾನದ ಭದ್ರ ಬುನಾ ದಿಯನ್ನು ಹಾಕಿ ಪೋಷಣೆ ಮಾಡುವ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರೆಂಬ ಶಿಲ್ಪಿಗಳೇ ನಾಡಿನ ರಕ್ಷಕ ಪೋಷಕ ಬಂಧುಗಳು ಬದುಕಿಗೊಂದು ಚೌಕಟ್ಟು ಕಲ್ಪಿಸಿ ನ್ಯಾಯ ಸಮ್ಮತವಾದ ಹಕ್ಕುಗಳ ಪರಿಪಾಲನೆಗೆ ಬೆನ್ನು ತಟ್ಟಿ ನಿಜ ಅರ್ಥದ ಜೀವನದ ದಾರಿಗೆ ಕೈ ತೋರುವ ಶಿಕ್ಷಕರ ಋಣ ತೀರಿಸಲಾಗದು! ಶಿಕ್ಷಕರ ದಿನಾಚರಣೆ ಹಿನ್ನಲೆ..ಶಿಕ್ಷಕರ ದಿನಾಚರಣೆಯನ್ನು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಗೌರವಾರ್ಥ ವಾಗಿ ಅವರ ಜನ್ಮ ದಿನ ದಿನವಾದ ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ , ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತದ ಎರಡನೇ ರಾಷ್ಟ್ರಪತಿ ಗಳಾಗಿದ್ಧರು ಹಾಗೂ ಒಬ್ಬ ಹೆಸರಾಂತ ಶಿಕ್ಷಣ ತಜ್ಞ ರಾಗಿದ್ಧರು.
ಶಿಕ್ಷಕರ ದಿನಾಚರಣೆಯ ಆಚರಣೆಯೇ ಇತಿಹಾಸ:- ಸರ್ವಪಲ್ಲಿ ರಾಧಾಕೃಷ್ಣನ್ ರವರ ವಿದ್ಯಾರ್ಥಿಗಳು ಅವರ ಬಳಿ ಬಂದು ನಿಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜ್ರಂಭನೆಯಿoದ ಆಚರಿಸಲಿದ್ದೇವೆ ತಾವು ಖಂಡಿತಾ ಬರಬೇಕೆಂದು ಆಹ್ವಾನಿಸಿದರಂತೆ ಅದಕ್ಕುತ್ತರವಾಗಿ ಡಾ.ರಾಧಾಕೃಷ್ಣನ್ ರವರು ಇ ದಿನವನ್ನು ತನ್ನ ಹುಟ್ಟು ಹಬ್ಬವನ್ನಾಗಿ ಆಚರಿಸುವ ಬದಲು ಶಿಕ್ಷಕರ ದಿನವೆಂದಕೇ ಆಚರಿಸಬಾರದು ? ಇದರಿಂದ ನನಗೆ ಹೆಮ್ಮೆ ಸಂತೋಷವಾಗುತ್ತದೆ ಎಂದರoತೆ ಗಂಭೀರವಾಗಿ ಪರಿಗಣಿಸಿದ ವಿದ್ಯಾರ್ಥಿಗಳು ಅಂದಿನಿoದಲೂ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರoತೆ ಅಂದಿನಿoದ ಪ್ರತಿವರ್ಷ ಸೆಪ್ಟೆಂಬರ್ ೫ರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ದೇಶಾದ್ಯಂತ ಆಚರಿಸುತ್ತಾ ಬರಲಾಗುತ್ತದೆ,೧೯೬೨ ರಿಂದಲೂ ಆಚರಿಸಿಕೊಂಡು ಬರುತ್ತಿರುವ ಇ ದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಗೆ ಕೊಡುಗೆ ನೀಡಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನ, ಮೂದಲ ಕಾರ್ಯಕ್ರಮದಲ್ಲಿ ಅವರೇ ಹೇಳಿದಂತೆ “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಿರಬೇಕು ” ಎಂದು ಕರೆ ನೀಡಿದರು, ಇ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ’ ಶಿಕ್ಷಕರ ದಿನ ‘ಮಕ್ಕಳು ಆಚರಿಸುವ ಮೂಲಕ ನಾವೆಲ್ಲರು ಶಿಕ್ಷಕರಿಗೆ ನೀಡುವ ಗೌರವವಾಗಿದೆ.
ಶಿಕ್ಷಕರ ಮಹತ್ವ :-“ಮುಂದೇ ಗುರಿ ಇರಬೇಕು ಹಿಂದೆ ಗುರು ಇರಬೇಕು ,”ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕ್ತಿ “ನೂರಾರು ಉಕ್ತಿಗಳನ್ನು ಕಾಣಬಹುದು ಗುರು ಶ್ರೇಷ್ಠ ತೆಯನ್ನು ಹಾಡಿ ಹೂಗಳಿವೆ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಅಂಧತ್ವದಿoದ ಹಿಡಿದು ಜ್ಞಾನದೆಡೆಗೆ ಕರೆದೊಯ್ಯವ ಶಿಕ್ಷಕರು ನಿಸರ್ಗದ ನೈಜ ಬದುಕಿನ ತಿರುಳನ್ನು ಉಣ ಬಡಿಸುವವರು, ಸಂಸ್ಕಾರದ ಉತ್ಕೃಷ್ಟ ಅನುಭವವನ್ನು ನೀಡುವವರು, ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪೂರಕವಾಗಿ ಮೌಲ್ಯವನ್ನು ತುಂಬುವರು ಆ ಮೂಲಕ ಸಮಾಜದ ಸರ್ವಾಂಗೀಣ ಆರೋಗ್ಯ ಸಂಕಲ್ಪಕ್ಕೆ ಅಡಿಪಾಯ ಹಾಕುವರು ಶಿಕ್ಷಕರು ತಂದೆ ತಾಯಿ ಬಿಟ್ಟರೇ ನಂತರದ ಸ್ಥಾನವನ್ನು ಕಲಿಸಿದ ಶಿಕ್ಷಕರಿಗೆ ನೀಡಲಾಗಿದೆ, ಭಾರತೀಯ ಪರಂಪರೆಯಲ್ಲಿ ಗುರು ಸ್ಥಾನಕ್ಕೆ ಹಿಂದಿನಿoದಲೂ ಅಪಾರವಾದ ಗೌರವವಿದೆ ಬದಲಾದ ಯುಗಮಾನದಲ್ಲಿಯೂ ಶಿಕ್ಷಕ ವೃತ್ತಿಗೆ ಹೆಚ್ಚಿನ ಬೆಲೆ ಮತ್ತು ನೆಲೆ ಬಂದಿದ್ಧು ಶಿಕ್ಷಕರೆಂದರೇ ತಾತ್ವಿಕ ಸತ್ಯದ ನೆಲೆ ಗಟ್ಟಿನಲ್ಲಿ ಜಗತ್ತನ್ನು ಗಟ್ಟಿಗೊಳಿಸುವ ನಿರ್ಮಾತೃಗಳು.
ಬದಲಾದ ಶಿಕ್ಷಣ ವ್ಯವಸ್ಥೆ:-
ಕಾಲಮಾನಕ್ಕೆ ತಕ್ಕಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೂಸ ನಿಯಮಗಳು ಶಿಕ್ಷಣದ ಸಾರ್ವತ್ರಿಕರಣದ ಸಫಲತೆಗೆ ಹೆಚ್ಚಿನ ಸ್ಥಾನಮಾನ ನೀಡಿದ್ಧು ಶಿಕ್ಷಕರಿಗೆ ತರಗತಿಯಲ್ಲಿ ವಿಭಾಗವಾರು ವಿಷಯಗಳನ್ನು ಹಂಚಿಕೆ ಮಾಡಿದ್ಧಲ್ಲದೇ ಸಾಕ್ಷರತೆಯ ಸುಧಾರಣೆಗೆ ಪಣ ತೊಟ್ಟು ನಿಂತಿವೆ ದೇಶದ ಆರ್ಥಿಕ ಸಂಪನ್ಮೂಲವನ್ನು ನೀಡಿ ಸಶಕ್ತಗೊಳಿಸುತ್ತಿರುವದು ಶ್ಲಾಘನೀಯ ಸಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಶಿಕ್ಷಣ ನೀಡಲಾಗಿತ್ತಿದೆ,ಕೈಯಲ್ಲಿ ಕೋಲು ಹಿಡಿಯುವ ಬದಲು ಕಂಪ್ಯೂಟರ್ ನ ಮೌಸ್ ಹಿಡಿದಿದ್ದಾರೆ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಅಂತರ್ ಜಾಲದ ಶಿಕ್ಷಣದ ತಾಣ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ ಜ್ಞಾನದ ಪೈಪೋಟಿ ಹಾಗೂ ಬಂಧುತ್ವಕ್ಕೆ ಸಂಹನದ ಸೇತುವೆಯಾಗಿ ನಿಂತುಕೊAಡಿದೆ.
ಶಿಕ್ಷಕರಿಗೆ ಬೇಕಿರುವದು ಅನುಕಂಪವಲ್ಲಾ ಅಭಿಮಾನ.. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಕರು ದುಡಿದಿದ್ಧಾರೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಾಗಿದೆ ಅತಿಥಿ ಉಪನ್ಯಾಸಕರಿಗೆ ಖಾಯಂ ಭದ್ರತೆ, ಶಿಕ್ಷಕರ ಸಂರಕ್ಷಣಾ ಸಮಿತಿ, ಶಾಲಾ ಭದ್ರತಾ ಮಂಡಳಿ ರಚನೆ ,ಸಾರಿಗೆ ಸಂಪರ್ಕ ವ್ಯವಸ್ಥೆ, ಮೂಲಭೂತ ಸೌಲಭ್ಯವುಳ್ಳ ಶಾಲಾ ಕಾಲೇಜ್ ಗಳ ಕಟ್ಟಡ ನಿರ್ಮಾಣ ,ಸೇರಿದಂತೆ ಹಲುವಾರು ಸೌಕರ್ಯ ಗಳನ್ನು ಕಲ್ಪಿಸಿಕೊಡಬೇಕಿದೆ.ಶಿಕ್ಷಕರಿಗೆ ಬೇಕಿರುವದು ಕೇವಲ ಅನುಕಂಪವಲ್ಲಾ ಅಭಿಮಾನ! ಶಿಕ್ಷಕ ವೃತ್ತಿಗೆ ಸೌಕರ್ಯ ಕಲ್ಪಿಸಿದರೇ ಸೌಲಭ್ಯಗಳು ಹುಟ್ಟಿಕೊಳ್ಳುತ್ತವೆ.
ಶಿಕ್ಷಣಕ್ಕೆ ಶಿಕ್ಷಕರೇ ಆಧಾರ:- ದೇಶ ಪ್ರಗತಿ ಹೊಂದಲು ಸರ್ವತೋಮುಖ ಶಿಕ್ಷಣ ನೀಡುವದೇ ಬಲವಾದ ಅಸ್ತ್ರ .ಎಷ್ಟೇ ಸಂಪನ್ಮೂಲವಿದ್ಧರೂ ಶಿಕ್ಷಣವಿಲ್ಲದಿದ್ಧರೇ ಎಲ್ಲವೂ ಶೂನ್ಯ ! ಕಟುಕ ಪ್ರಾಣಿ ಮೇಲೆರಗಿದಾಗ ಬಂದೂಕಿನ ಲೈಸ್ಸನ್ಸ ತೋರಿಸಿದರೇ ಓಡಿ ಹೋಗುವದೇ ಬದಲಾಗಿ ಸೆನಸಾಡಿ ಯುದ್ಧ ಮಾಡಿ ಗೆಲ್ಲಬೇಕು ,ನಮಗೆ ಬೇಕಿರುವದು ಸಾಮರ್ಥ್ಯ ವೇ ಹೂರತು ಸರ್ಟಿಪಿಕೆಟ್ ಅಲ್ಲಾ! ನಾವಿಂದು ನೈಜ ಶಿಕ್ಷಣದತ್ತ ಹೆಜ್ಜೆ ಹಾಕಬೇಕಾಗಿದೆ,ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಶಿಕ್ಷಕ ವೃತ್ತಿಯಲ್ಲಿರುವ ಬಂಧುಗಳನ್ನು ಬಾಂಧವ್ಯ ದಿಂದ ಕಂಡು ವಂದಿಸುವ….ಶಿಕ್ಷಕರ ದಿನಾಚರಣೆಯ ಶುಭಾಶಯಗಳು . .

ಶ್ರೀಮತಿ ಭಾಗ್ಯಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ.
ಸಾ-ಜಂತಲಿ ಶಿರೂರು.ತಾ-ಮುಂಡರಗಿ.
ಜಿ-ಗದಗ. 9980248730, 6362270699

error: