April 25, 2024

Bhavana Tv

Its Your Channel

ಆಕೆಯನ್ನು ನೋಡಲು ಬಂದ ಆತ: ಗ್ರಾಮಸ್ಥರು ಅಕ್ರಮ ಸಂಬOಧದ ಶಂಕೆಯಲ್ಲಿ ಇಬ್ಬರನ್ನೂ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದರು

ಮೈಸೂರು: ಪ್ರೀತಿಸುತ್ತಿದ್ದ ಯುವ ಜೋಡಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮನಬಂದAತೆ ಥಳಿಸಿರುವ ನಡೆಸಿರುವ ಅಮಾನವೀಯ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬಲ್ಲಿ ಈ ಘಟನೆ ನಡೆದಿದೆ. ವಿವಾಹಿತೆ ಎಂದು ಹೇಳಲಾಗುತ್ತಿರುವ ಯುವತಿಯೋರ್ವಳು ಯುವಕನೊಂದಿಗೆ ಅನೈತಿಕ ಸಂಬoಧ ಹೊಂದಿದ್ದಾಳೆAದು ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು ಈ ಕೃತ್ಯ ಎಸಗಿದ್ದಾರೆ. ರಾತ್ರಿ ಪೂರ್ತಿ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಮನ ಬಂದAತೆ ಥಳಿಸಿ ಹಲ್ಲೆ ನಡೆಸಿದ್ದಾರೆ.

ಇವರಿಬ್ಬರ ಮಧ್ಯೆ ಹಲವು ವರ್ಷಗಳಿಂದ ಅನೈತಿಕ ಸಂಬAಧ ಇತ್ತು ಎನ್ನಲಾಗಿದೆ. ಯುವತಿಯ ಮನೆಗೆ ಯವಕ ಬಂದಾಗ ಗ್ರಾಮಸ್ಥರು ಆತನನ್ನು ಹಿಡಿದು ಯುವತಿಯನ್ನು ಸೇರಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಇಬ್ಬರಿಗೂ ಥಳಿಸಿದ್ದಾರೆ. ಇಬ್ಬರನ್ನೂ ಗ್ರಾಮದ ನಡುಬೀದಿಯ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಲ್ಲದೆ, ಅನ್ನ-ನೀರು ಕೊಡದೆ ಸತಾಯಿಸಲಾಗಿದೆ ಎನ್ನಲಾಗಿದೆ

error: