March 29, 2024

Bhavana Tv

Its Your Channel

ಶಿಕ್ಷಕನ ವರ್ಗಾವಣೆಯಿಂದ ವಿದ್ಯಾರ್ಥಿಗಳ ಕಣ್ಣೀರು

ಕಲಬುರ್ಗಿ : ಸರಕಾರಿ ಪ್ರೌಢ ಶಾಲೆ ಕೆಲ್ಲೂರು, ಚಿತ್ತಾಪೂರ ತಾಲೂಕ ಕಲಬುರ್ಗಿ ಜಿಲ್ಲೆಯ ಸಹಶಿಕ್ಷಕರಾದ ಬಸಪ್ಪ ಮುಗಳಕೋಡ್ ಇವರು ಸರಕಾರಿ ಪ್ರೌಢ ಶಾಲೆ ಇಂಗಳಗಿ, ತಾಲೂಕು ಚಿತ್ತಾಪೂರ ಇಲ್ಲಿಗೆ ವರ್ಗಾವಣೆಗೊಂಡರು.

ಶ್ರೀ ಬಸವರಾಜ ಮುಗಳಕೋಡ್ ಇವರು ವರ್ಗಾವಣೆಗೊಂಡ ಪ್ರಯುಕ್ತ ವಿದ್ಯುಕ್ತವಾಗಿ ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಕೆಲ್ಲೂರ ಗ್ರಾಮದ ಹಿರಿಯರು ಹಾಗೂ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೃಷ್ಣ ರೆಡ್ಡಿ ಅವರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹೊನ್ನೇಶ, ಮುಖ್ಯಗುರುಗಳಾದ ಶರಣಪ್ಪ ಹೊಸಮನಿ, ಶಿಕ್ಷಕರಾದ ನಿರಂಜನ ಕುಮಾರ್, ಸೋಮಪ್ಪ, ನಸೀಮಾ ಬೇಗಂ, ಅನಿತಾ ಬಾಯಿ, ಜಯಲಕ್ಷ್ಮೀ ಸೇರಿದಂತೆ ಊರಿನ ಗಣ್ಯರು ಹಾಜರಿದ್ದರು.

ಶಾಲೆಯ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು, ಗುರು ಹಿರಿಯರು ಎಲ್ಲರೂ ಕೂಡಾ ಭಾರವಾದ ಹೃದಯದಿಂದ ಕಣ್ಣೀರು ಸುರಿಸುತ್ತಾ ಕರ್ತವ್ಯದಿಂದ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ : ರಮೇಶ ಇಟಗೋಣಿ

error: