April 19, 2024

Bhavana Tv

Its Your Channel

ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ನಿಧನ

ಯಲ್ಲಾಪುರ: ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿo ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಸವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು. ಪದ್ಮಶ್ರೀ ಪುರಸ್ಕೃತರು, ಸರ್ವಧರ್ಮಗಳ ಸಮಾನತೆಯ ಹರಿಕಾರರಾಗಿ, ಜನರಾಡುವ ಸಾಮಾನ್ಯ ಭಾಷಾ ಶೈಲಿಯಲ್ಲಿ ಎಲ್ಲಾ ಧರ್ಮಗ್ರಂಥಗಳ ಸಾರಾಮೃತವೆನ್ನು ಉಣಬಡಿಸುತ್ತಾ ಸರ್ವರಲ್ಲೂ ಅಧ್ಯಾತ್ಮಿಕ ಮತ್ತು ಸಮಾನತೆಯನ್ನು ತರುವಲ್ಲಿ ಖ್ಯಾತರಾದ ಪ್ರವಚನಕಾರರಾದ ಮಹಾಲಿಂಗಪುರ ನಗರದ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ. ಇವರ ನಿಧಾನಕ್ಕೆ ಮಾಜಿ ಸಚಿವರು,ಶಾಸಕರಾದ ಎಚ್.ಕೆ.ಪಾಟೀಲ, ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರ, ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ,ಜಿ.ಆರ್.ಕುಂಬ್ರಿಗುಡ್ಡೆ,ಪೈ.ಗ.ಭಟ್ಟ ಸುಬ್ರಾಯ ಬಿದ್ರೆಮನೆ,ರಾಮು ನಾಯ್ಕ,ನಾಗೇಶ ಯಲ್ಲಾಪುರಕರ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

error: