April 20, 2024

Bhavana Tv

Its Your Channel

ಸವಿತಾ ಸಮಾಜಕ್ಕೆ ಆಹಾರ ಕಿಟ್ ವಿತರಿಸಿದ ಜಪಾನಂದ ಸ್ವಾಮೀಜಿ

ಮಧುಗಿರಿ: ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಶನ್ ಇವರ ವತಿಯಿಂದ ಕೋವಿಡ್ ೧೯ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಸಿಲುಕುವ ಸವಿತ ಸಮಾಜದ ಸುಮಾರು ೭೦ಕು ಹೆಚ್ಚು ಕುಟುಂಬಗಳಿಗೆ ಪಾವಗಡದ ಶ್ರೀ ಜಪಾನಂದ ಸ್ವಾಮೀಜಿಯವರು ಆಹಾರದ ಕಿಟ್ ಅನ್ನು ವಿತರಿಸಿದರು.


ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀ ಜಪಾನಂದ ಸ್ವಾಮೀಜಿ ನಾವು ಜಿಲ್ಲೆಯಾದ್ಯಂತ ಹಲವಾರು ಕೆಲಸವನ್ನು ಮಾಡುತ್ತಿದ್ದು, ಹಾಗೂ ಬಡವರಿಗೆ, ಅಲೆಮಾರಿಗಳಿಗೆ, ಬುಡಕಟ್ಟು ಜನಾಂಗದವರಿಗೆ ಹಾಗೂ ಪತ್ರಕರ್ತರಿಗೆ ಆಹಾರದ ಕಿಟ್ ಮತ್ತು ಕೋವಿಡ್ ರೋಗಿಗಳಿಗೆ ಔಷಧಿಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೂ ಮತ್ತು ಪೌರಕಾರ್ಮಿಕರಿಗೂ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಹ ನಮ್ಮ ಆಶ್ರಮದಿಂದ ಕಿಟ್ ಗಳನ್ನೂ ವಿತರಿಸಲಾಗುವುದು ಮತ್ತು ಈ ದಿನ ಸವಿತಾ ಸಮಾಜದವರಿಗೆ ಕಿಟ್ ವಿತರಿಸಲು ಮಧುಗಿರಿ ಡಿವೈಎಸ್ಪಿ ಮುಖ್ಯ ಕಾರಣವಾಗಿದ್ದಾರೆ, ಅವರು ನಮ್ಮ ಬಳಿ ಬೀದಿ ವ್ಯಾಪಾರಿಗಳು ಸಹ ಆಹಾರದ ಕಿಟ್ ಅನ್ನು ನೀಡಿ ಸ್ವಾಮೀಜಿ ಎಂದು ನಮ್ಮ ಬಳಿ ಹೇಳಿದ್ದಾರೆ, ಸಾರ್ವಜನಿಕರು ಲಸಿಕೆಯನ್ನು ತಮಗೋಸ್ಕರ ಅಲ್ಲದಿದ್ದರೂ, ತಮ್ಮ ಕುಟುಂಬ ಕೋಸ್ಕರ ವಾದರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ವರದಿ ಮಧುಸೂದನ್ ಮಧುಗಿರಿ

error: