ಉಡುಪಿ: ಮುಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಕೊಲ್ಲೂರು,ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ಸಂಯುಕ್ತಆಶ್ರಯದಲ್ಲಿ ದಳಿ ಜಟ್ಟಿಗೇಶ್ವರ ಸಮುದಾಯ ಭವನದಲ್ಲಿ ಅಣಬೆ ಕೃಷಿ ಹಾಗೂ ನರ್ಸರಿ ಮತ್ತು ಕಸಿಕಟ್ಟುವ ವಿಚಾರವಾಗಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಔಷಧಿ ಗಿಡ ನೆಡುವ ಮೂಲಕ ನಡೆಸಲಾಯಿತು.
ಅಣಬೆ ಕೃಷಿಯ ಮಾಹಿತಿಯನ್ನು ಡಾ| ಸಂತೋಷ್ ಹಾಗೂ ನರ್ಸರಿ ಮತ್ತು ಕಸಿ ಕಟ್ಟುವ ವಿಚಾರವನ್ನು ಡಾ| ಚೈತನ್ಯ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವವರಿAದ ಅತ್ಯುತ್ತಮವಾಗಿ ವಿವರಿಸಿದರು
ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಡಾ ಶ್ರೀಕಾಂತ್, ಕೊಲ್ಲೂರು
ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ನಾಯಕ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವರಾಮಕೃಷ್ಣ ಭಾರತೀಯ ವಿಕಾಸ್ ಟ್ರಸ್ಟ್ ನ ಸಂಯೋಜಕರಾದ ಅರುಣ್ ಮತ್ತು ಸುಮಂತ್ ಭಟ್ ಹಾಗೂ ಗ್ರಾಮಸ್ಥರು .
ಭಾರತಿಯ ವಿಕಾಸ್ ಟ್ರಸ್ಟಿನ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು
ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ.ರೂಪೇಶ್ ಸಿಂಗ್ ಚೌಹಾನ್ ಎಲ್ಲರಿಗೂ ವಂದನಾರ್ಪಣೆ ಮಾಡಿದರು.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ