ಕಾರ್ಕಳ: ಪೋಲಿಸ್ ಅರಕ್ಷಕರ ಠಾಣೆ ಕಾರ್ಕಳ ಮತ್ತು ರೋಟರಿ ಆನ್ಸ್, ರೋಟರಾಕ್ಟ್ ಸಂಸ್ಥೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಕೊರೋನದ ಮುನ್ನೆಚ್ಚರಿಕೆ ಕರಪತ್ರಗಳನ್ನು ಅರಕ್ಷಕರ ಠಾಣೆಯಲ್ಲಿ ಬಿಡುಗಡೆ ಮಾಡಲಾಯಿತು. ಹಾಗೂ ಮಾಸ್ಕ ಕಡ್ಡಾಯ ಎನ್ನುವ ಪೋಸ್ಟರ್ ಸ್ಟಿಕರ್ ಗಳನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಠಾಣೆಯ ಸಿಪಿಐ ಅಧಿಕಾರಿ ಸಂಪತ್ ಕುಮಾರ್ ವಹಿಸಿದ್ದರು. ನಗರ ಠಾಣೆಯ si ಆಗಿರುವ ದಾಮೋದರ್ ಮತ್ತು ರೂರಲ್ ಠಾಣೆಯ si ನಾಸಿರ್ ಹುಸೇನ್ ಅವರು ಅತಿಥಿಗಳಾಗಿದ್ದರು. ಕಾರ್ಯಕ್ರಮದ ಸ್ವಾಗತವನ್ನು ರೋಟರಿ ಆನ್ಸ್ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ ಅವರು ಮಾಡಿದರು. ಕಾರ್ಯಕ್ರಮದ ನಿರೂಪಣೆ ಆನ್ಸ್ ಅಧ್ಯಕ್ಷೆ ಕಾರ್ಯದರ್ಶಿ ಸುಮಾ ನಾಯಕ್ ಅವರು ವಹಿಸಿದ್ದರು. ರೋಟರಾಕ್ಟ್ ಅಧ್ಯಕ್ಷ ರೋ ರಾಹುಲ್ ರಾಜೇಶ್ ಅವರು ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿ ವರ್ಗದವರು, ರೋ ಬಾಲಕೃಷ್ಣ, ಜಡಿಡಿ ರೋ ಪ್ರಶಾಂತ್, ರೋಟರಿ ಕಾರ್ಯದರ್ಶಿ ರೋ ಸಮೀರ್ ಅವರು ಉಪಸ್ಥಿತರಿದ್ದರು. ಬಂದ ಎಲ್ಲರನ್ನು ಆನ್ ಶಶಿಕಲಾ ಗೌಡ ಅವರು ವಂದಿಸಿದರು.
ಮುಂದೆ ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ ಎನ್ನುವ ಸಂದೇಶವನ್ನು ನೀಡುತ್ತಾ, ಅರಕ್ಷಕರ ಠಾಣೆ ಅವರ ವತಿಯಿಂದ ಮಾಸ್ಕ್ ಧರಿಸದೆ ಇರುವ ವ್ಯಕ್ತಿಗಳಿಗೆ ಯಾವುದೇ ರೀತಿಯ ದಂಡವನ್ನು ನೀಡದೆ ಉಚಿತ ಮಾಸ್ಕ್ ವಿತರಣೆಯನ್ನು ಮಾಡಲಾಯಿತು. ಕಾರ್ಕಳದ ಬಸ್ ಸ್ಟ್ಯಾಂಡ್, ಜೋಡುರಸ್ತೆ, ಬಂಡಿಮಠ ಕಾರ್ಯಕ್ರಮವು ನಡೆಯಿತು. ಕರಪತ್ರಗಳನ್ನು ಹಂಚುತ್ತಾ ಜನರಿಗೆ ಉತ್ತಮ ವನ್ನು ಮಾಹಿತಿ ಕೊಡಲು ಕಾರ್ಯಕ್ರಮ ಸಾಕ್ಷಿಯಾಯಿತು.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ