April 20, 2024

Bhavana Tv

Its Your Channel

ಹೊಸ ವರ್ಷದ ಸಂಭ್ರಮ ; ಕಾರು ಡಿಕ್ಕಿ- ಇಬ್ಬರ ಸಾವು.

ಕಾರ್ಕಳ: ಹೊಸ ವರ್ಷದ ಶುಭಾಶಯ ಕುಳಿತು ರಸ್ತೆಯಲ್ಲಿ ಬರೆಯುವ ವೇಳೆ ಗುರುವಾರ ರಾತ್ರಿ ಸುಮಾರು ಹತ್ತು ಮೂವತ್ತರ ವೇಳೆಗೆ ವೇಗವಾಗಿ ಬರುತ್ತಿದ್ದ ಈಕೋ ಕಾರು ಡಿಕ್ಕಿ ಹೊಡೆದು ಬಿಜಾಪುರ ಮೂಲದ ಶರಣಪ್ಪ ಗೌಡರ್, ಹಾಗೂ ಸಿದ್ದಪ್ಪ ಮೃತರಾಗಿದ್ದಾರೆ. ಶರಣಪ್ಪಗೌಡ ಸ್ಥಳದಲ್ಲಿ ಮೃತರಾದರೆ, ಸಿದ್ದಪ್ಪ ತುರ್ತು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಕೊಂಡೊಯ್ಯುವಾಗ ದಾರಿ ಮಧ್ಯ ಮೃತ ರಾಗಿರುತ್ತಾರೆ. ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಕುಂಟಿ ಬೈಲು ಸಮೀಪ ಅಪಘಾತ ವಾಗಿರುತ್ತದೆ. ಅಪಘಾತ ನಡೆದ ಕೆಲ ವೇಳೆ ಯುವಕರಿಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದರು. ಗ್ರಾಮ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: