ಕಾರ್ಕಳ: ಸಮಾಜಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಹಲವಾರು ರೀತಿಯಲ್ಲಿ ಕಾರ್ಕಳಕೆ ಪರಿಚಯ ಇರುವ ಸಂಸ್ಥೆ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಿಂದೆ ನಡೆಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಫಲಾನುಭವಿಗಳಿಗೆ ಕನ್ನಡಕ ಕೊಡುವಂತಹ ಕಾರ್ಯಕ್ರಮವು ನಮ್ಮ ಸೇವೆಯಲ್ಲಿ ಒಂದಾಗಿದೆ ಎಂದು ರೋಟರಿ ಆನ್ಸ್ ಕ್ಲಬಿನ ಅಧ್ಯಕ್ಷೆ ರೋ. ರಮಿತ ಶೈಲೆಂದ್ರ ತಿಳಿಸಿದರು.
ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ಯುವಕ ಮಂಡಲ (ರಿ) ಕೊಳಕೆ ಇರ್ವತ್ತೂರು ಇವರ ಸಹಯೋಗದೊಂದಿಗೆ , ಇರ್ವತ್ತೂರ್ನಲ್ಲಿ ಈ ಹಿಂದೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿದ್ದು ಅಲ್ಲಿ ೪೮ ಫಲಾನುಭವಿಗಳಿಗೆ ಕನ್ನಡಕ ಅಗತ್ಯತೆ ಬಂದಾಗ ಅದನ್ನು ನೀಡುವಂತಹ ಕಾರ್ಯಕ್ರಮವು ಆಗಿರುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಕವಿತಾ ಶಂಕರ್ ಅವರು ವಹಿಸಿಕೊಂಡಿದ್ದರು. ಸ್ವಾಗತ ಶೇಖರ್ ಅಂಚನ್, ಹಂಸರಾಜ್ ಯುವಕ ಮಂಡಲ ಅಧ್ಯಕ್ಷ ಧನ್ಯವಾದಿಸಿದರು, ರಾಜೇಂದ್ರ ಪೂಜಾರಿ ಎಂಜಾಯ್ ಫ್ರೆಂಡ್ಸ್ ಅಧ್ಯಕ್ಷ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಅನಿತಾ ಕುಲಾಲ್, ಭರತ್ ಜೈನ್ ಹಾಗೂ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು, ಇರ್ವತ್ತೂರ್ನ ಗ್ರಾಮಸ್ಥರು ನೆರೆದಿದ್ದರು.
More Stories
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ
ಮಲ್ಪೆ ಮೀನಗಾರಿಕಾ ರೈತ ಉತ್ಪಾದಕ ಕಂಪನಿಯಿ0ದ ವಿಶ್ವ ಪರಿಸರ ದಿನಾಚರಣೆ