April 19, 2024

Bhavana Tv

Its Your Channel

ಬೈಂದೂರು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆ; ಕಾರ್ಕಳದ ಬೈಪಾಸ್ ರಸ್ತೆಯಲ್ಲಿ ನಾಲ್ಕು ಜನ ಹಂತಕರ ಬಂಧನ

ಬೈOದೂರು: ಬೈಂದೂರು ಸಮೀಪದ ಒತ್ತಿನೆಣೆ ಹೇನ್‌ಬೇರು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರಿನೊಂದಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬAಧಿಸಿ ಬೈಂದೂರು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ನಾಲ್ಕು ಜನ ಹಂತಕರನ್ನು ಕಾರ್ಕಳದ ಬೈಪಾಸ್ ರಸ್ತೆಯಲ್ಲಿ ಬಂಧಿಸಿದ್ದಾರೆ.

ಬOಧಿತ ಆರೋಪಿಗಳಲ್ಲಿ ಪ್ರಮುಖ ಆರೊಪಿಗಳನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್ (ದೇವಾಡಿಗ)(52), ಕಾರ್ಕಳ ತಾಲೂಕಿನ ಮೂರೂರು ಸಮೀಪದ ಹಿರ್ಗಾನ ನಿವಾಸಿ ಶಿಲ್ಪಾ ಪೂಜಾರಿ(30) ಎಂದು ಗುರುತಿಸಲಾಗಿದ್ದು, ಕೊಲೆಗೆ ಸಹಕರಿಸಿದವರನ್ನು ಸದಾನಂದ ಶೇರಿಗಾರನ ಪತ್ನಿಯ ಸಹೋದರರಾದ ಕಾರ್ಕಳ ತಾಲೂಕಿನ ಶಿರ್ವದ ಸೂಡ ಗ್ರಾಮದ ನಿವಾಸಿಗಳಾದ ನಿತಿನ್ ದೇವಾಡಿಗ (40) ಹಾಗೂ ಸತೀಶ್ ದೇವಾಡಿಗ(50) ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಕಾರಿನೊಂದಿಗೆ ಸುಟ್ಟು ಹೋದ ವ್ಯಕ್ತಿಯನ್ನು ಕಾರ್ಕಳ ತಾಲೂಕಿನ ಅತ್ತೂರು ಚರ್ಚ್ ಸಮೀಪದ ಭಾರತ್ ಬೀಡಿ ಕಾಲೊನಿಯ ನಿವಾಸಿ ಗಾರೆ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗ (60) ಎಂದು ತಿಳಿದು ಬಂದಿದೆ.

ಮೃತ ಆನಂದ

ಫಟನೆಯ ವಿವರ :
ಮಂಗಳವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಶಿಲ್ಪಾ ಪೂಜಾರಿ, ಗಾರೆ ಮೇಸ್ತ್ರಿ ಆನಂದ ದೇವಾಡಿಗನನ್ನು ಮನೆಗೆ ಕರೆಯಿಸಿಕೊಂಡಿದ್ದು, ಮದ್ಯ ಕುಡಿಸಿದ್ದಾಳೆ. ಈ ಸಂದರ್ಭ ಆನಂದ ದೇವಾಡಿಗ ತನಗೆ ಕಾಮ ಪ್ರಚೋದನೆ ಆಗುವುದಿಲ್ಲ ಎಂದಿದ್ದ ಆನಂದನಿಗೆ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ದೆ ಮಾತ್ರೆಗಳನ್ನು ಸೇವಿಸುವಂತೆ ಪ್ರಚೋದಿಸಿ ಮಾತ್ರೆ ತಿನ್ನಿಸಿದ್ದಾಳೆ. ಅಲ್ಲದೇ ಮದ್ಯದ ಬಾಟಲಿಗೂ ಮಾತ್ರೆ ಪುಡಿಮಾಡಿ ಹಾಕಿ ಕುಡಿಸಿದ್ದಾಳೆ. ಆನಂದ ದೇವಾಡಿಗ ಬಳಿಕ ಅಸ್ವಸ್ಥನಾಗಿ ಪ್ರಜ್ಞೆ ಕಳೆದುಕೊಂಡ ತಕ್ಷಣ ಸದಾನಂದನಿಗೆ ಮಾಹಿತಿ ನೀಡಿದ ಶಿಲ್ಪಾ ಕಾರು ತರುವಂತೆ ತಿಳಿಸಿದ್ದಾಳೆ.

ಸದಾನಂದ ತನ್ನ ಹಳೆಯ ಕಾರಿನಲ್ಲಿ ಆನಂದ ದೇವಾಡಿಗನನ್ನು ಹಿಂಬದಿಯಲ್ಲಿ ಕುಳ್ಳಿರಿಸಿ ಮುಂದಿನ ಸೀಟಿನಲ್ಲಿ ಸದಾನಂದ ಹಾಗು ಶಿಲ್ಪಾ ಬೈಂದೂರು ಕಡೆಗೆ ಬಂದಿದ್ದಾರೆ. ಬೈಲೂರು ಸಮೀಪದ ಪೆಟ್ರೋಲ್ ಬಂಕಿನಲ್ಲಿ 2 ಲೀಟರ್ ಬಾಟಲಿ ಹಾಗೂ 10 ಲೀಟರ್ ಕ್ಯಾನಿನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ.

ಬಳಿಕ ಈ ಹಿಂದೆ ಮುರ್ಡೇಶ್ವರ ಟ್ರಿಪ್ ನೆಪದಲ್ಲಿ ಸೂಕ್ತ ಸ್ಥಳದ ಆಯ್ಕೆ ಬಂದಿದ್ದ ಆರೋಪಿಗಳಾದ ಸದಾನಂದ ಮತ್ತು ಶಿಲ್ಪಾ ಆಯ್ಕೆ ಮಾಡಿದ್ದ ಒತ್ತಿನೆಣೆಗೆ ಬಂದಿದ್ದು ತಾವು ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಮೊದಲೇ ಸೂಚನೆ ನೀಡಿದಂತೆ ಆರೋಪಿ ಸದಾನಂದನ ಪತ್ನಿಯ ಸಹೋದರರಾದ ನಿತಿನ್ ಹಾಗೂ ಸಚಿನ್ ಎಂಬ ಆರೋಪಿಗಳು ಇನ್ನೊಂದು ಕಾರಿನಲ್ಲಿ ಬಂದು ಕರೆದೊಯ್ದಿದ್ದಾರೆ. ಬಳಿಕ ಶಿಲ್ಪಾ ಮನೆಯಲ್ಲಿ ಉಳಿದುಕೊಂಡ ಸದಾನಂದ ಹಾಗೂ ಶಿಲ್ಪಾ ಬುಧವಾರ ಸಂಜೆ ಬೆಂಗಳೂರಿಗೆ ಹೊರಟಿದ್ದಾರೆ. ಬಸ್ ಹಾಸನದಲ್ಲಿ ಹಾಳಾಗಿದ್ದರಿಂದ ಮತ್ತೆ ಮೂಡಬಿದ್ರೆಗೆ ಬಂದ ಆರೋಪಿಗಳು ಕಾರ್ಕಳದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಬೈಪಾಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಯಾಕೀ ಕೊಲೆ? :
ಆರೋಪಿ ಸದಾನಂದ ಶೇರಿಗಾರ್ ಈ ಹಿಂದೆ ಕಾರ್ಕಳದಲ್ಲಿ ಸರ್ವೇ ಇಲಾಖೆಯಲ್ಲಿ ಖಾಸಗಿ ಸರ್ವೇಯರ್ ಆಗಿದ್ದ, ಆತ 2019ರಲ್ಲಿ ವ್ಯಕ್ತಿಯೊಬ್ಬರ ಜಮೀನಲ್ಲಿ ಅಕ್ರಮವಾಗಿ ತನ್ನ ಕೈ ಬರಹದಲ್ಲಿ ರಸ್ತೆ ಇರುವುದಾಗಿ ನಕ್ಷೆ ತಯಾರಿಸಿಕೊಟ್ಟಿದ್ದ. ಈ ಪ್ರಕರಣದ ಬಗ್ಗೆ ಜಮೀನಿನ ಮಾಲೀಕರು ಸದಾನಂದ ಶೇರಿಗಾರ್ ವಿರುದ್ಧ ಖಾಸಗೀ ದೂರು ದಾಖಲಿಸಿದ್ದು ಎಫ್.ಐ.ಆರ್. ಆಗಿತ್ತು. ಈ ಬಗ್ಗೆ ನ್ಯಾಯಾಲಯ ಹಲವು ಬಾರಿ ವಾರಂಟ್ ಕಳುಹಿಸಿದ್ದರೂ ಹಾಜರಾಗಿರಲಿಲ್ಲ. ಹೈಕೋರ್ಟಿನಲ್ಲೂ ಜಾಮೀನು ಸಿಕ್ಕಿರಲಿಲ್ಲ. ಇದರಿಂದಾಗಿ ತಾನು ಸತ್ತಿರುವುದಾಗಿ ಬಿಂಬಿಸಿ ಪಲಾಯನ ಮಾಡುವ ಹುನ್ನಾರದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಅದರAತೆ ಕಾರ್ಯತಂತ್ರಕ್ಕೆ ಮುಂದಾದ ಸದಾನಂದನಿಗೆ ನೆನಪಾಗಿದ್ದೇ ಜಮೀನು ವಿಚಾರ ಒಂದರಲ್ಲಿ ಸದಾನಂದ ದೇವಾಡಿಗನಿಗೆ ಪರಿಚಯವಾಗಿ, ಆತ್ಮೀಯತೆ ಬೆಳೆಸಿಕೊಂಡಿದ್ದ ಹಿರ್ಗಾನ ಶಿಲ್ಪಾ ಪೂಜಾರಿ ಎಂಬ ವಿವಾಹಿತ ಮಹಿಳೆ. ಇದೇ ತಂತ್ರವನ್ನು ತಲೆಮರೆಸಿಕೊಂಡಿದ್ದ ಸದಾನಂದ ಶಿಲ್ಪಾ ಬಳಿ ಹೇಳಿಕೊಂಡಿದ್ದ. ಈ ಯೋಜನೆಗೆ ಶಿಲ್ಪಾ ಆಯ್ಕೆ ಮಾಡಿಕೊಂಡಿದ್ದೇ ನತದೃಷ್ಟ ಗಾರೆ ಮೇಸ್ತ್ರಿ ಆನಂದ ದೇವಾಡಿಗ!
ಯಾರೂ ಊಹಿಸಲೂ ಸಾಧ್ಯವಿರದ ರೀತಿಯಲ್ಲಿ ಭಯಾನಕ ತಂತ್ರ ಹೆಣೆದ ಸದಾನಂದ ದೇವಾಡಿಗ ಹಾಗೂ ಆತನ ಸ್ನೇಹಿತೆ ಇದೀಗ ಮಾಡಬಾರದ ಘೋರ ಕೃತ್ಯಕ್ಕೆ ಕಂಬಿ ಎಣಿಸುವಂತಾಗಿದೆ. ಅಮಾಯಕ ವ್ಯಕ್ತಿಯೊಬ್ಬ ಇವರ ಮೋಸಕ್ಕೆ ಬಲಿಯಾಗಿರುವುದು ನಿಜಕ್ಕೂ ದುರಂತ.

error: